
ನವದೆಹಲಿ(ಜ.11): 1,000 ಮತ್ತು 500 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದು ಮಾಡುವ ಸಲಹೆ ಮೊದಲು ಬಂದಿದ್ದು ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಅಲ್ಲ, ಆ ಸಲಹೆ ಬಂದಿದ್ದು ಕೇಂದ್ರ ಸರ್ಕಾರದಿಂದ ಎಂಬ ವಿಚಾರ ಈಗ ಬಹಿರಂಗವಾಗಿದೆ.
ಕೇಂದ್ರವು ನವೆಂಬರ್ 7ರಂದು ನೀಡಿದ ಸಲಹೆ ಆಧರಿಸಿ, ಆರ್'ಬಿಐನ ಆಡಳಿತ ಮಂಡಳಿಯು ನೋಟು ರದ್ದುಪಡಿಸುವಂತೆ ಮರುದಿನವೇ ಶಿಫಾರಸು ಮಾಡಿತು ಎನ್ನುವ ಸಂಗತಿ ಕೂಡ ಆರ್'ಬಿಐ ಟಿಪ್ಪಣಿಯಿಂದ ಬೆಳಕಿಗೆ ಬಂದಿದೆ. ‘ಖೋಟಾ ನೋಟುಗಳು, ಭಯೋತ್ಪಾದಕರಿಗೆ ಹಣಕಾಸಿನ ನೆರವು ಸಿಗುತ್ತಿರುವುದು ಮತ್ತು ಕಪ್ಪುಹಣದ ಸಮಸ್ಯೆ ನಿವಾರಿಸಲು ಗರಿಷ್ಠ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ಬಗ್ಗೆ ಪರಿಶೀಲನೆ ನಡೆಸಬಹುದು ಎಂಬ ಸಲಹೆ ಸರ್ಕಾರದಿಂದಲೇ ಬಂದಿತ್ತು ಎಂದು ಆರ್'ಬಿಐ ಹೇಳಿದೆ.
ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿಗೆ ನೀಡಿರುವ ಏಳು ಪುಟಗಳ ಟಿಪ್ಪಣಿಯಲ್ಲಿ ಈ ಮಾಹಿತಿ ನೀಡಲಾಗಿದೆ. ಕಾಂಗ್ರೆಸ್ ಸಂಸದ ಎಂ. ವೀರಪ್ಪ ಮೊಯಿಲಿ ಅವರು ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸರ್ಕಾರದ ಸಲಹೆಯನ್ನು ಪರಿಶೀಲಿಸಲು’ ಆರ್ಬಿಐನ ಕೇಂದ್ರೀಯ ಮಂಡಳಿ ಮಾರನೆಯ ದಿನ ಸಭೆ ಸೇರಿತು. ‘ಚರ್ಚೆ ನಡೆಸಿದ ನಂತರ, ಗರಿಷ್ಠ ಮುಖಬೆಲೆಯ ನೋಟುಗಳ ಮಾನ್ಯತೆ ರದ್ದು ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲು ತೀರ್ಮಾನಿಸಿತು’ ಎಂಬ ವಿವರ ಈ ಟಿಪ್ಪಣಿಯಲ್ಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.