
ಕೋಲ್ಕತ್ತಾ (ಆ. 29): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಿಸರ್ವ್ ಬ್ಯಾಂಕ್ನ ಅಧಿಕಾರಿಗಳು ಹಾಗೂ ನೌಕರರ ಸಂಘಟನೆ ಫೋರಂ(ಯುಎಫ್ಆರ್ಬಿಒಇ) ಸೆ.4 ಮತ್ತು 5ರಂದು ಎರಡು ದಿನಗಳ ಸಾಮೂಹಿಕ ರಜೆಗೆ ಕರೆ ನೀಡಿದೆ.
ಇದರಲ್ಲಿ ಬ್ಯಾಂಕ್ನ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಲಿದ್ದು, ಕೇಂದ್ರೀಯ ಬ್ಯಾಂಕ್ ಹಾಗೂ ದೇಶಾದ್ಯಂತ ಇರುವ ಇದರ ಅಧೀನ ಬ್ಯಾಂಕ್ಗಳ ವ್ಯವಹಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.
ರಿಟೇನರ್ಗಳಿಗೆ ಸಿಪಿಎಫ್(ಕಾಂಟ್ರಿಬಿಟರಿ ಪಿಎಫ್) ಪೆನ್ಶನ್ ಯೋಜನೆ ಹಾಗೂ 2012ರಿಂದ ನೇಮಕಗೊಂಡಿರುವವರಿಗೆ ಹೆಚ್ಚುವರಿ ಪಿಎಫ್ ನೀಡಬೇಕು ಎಂಬುದು ಫೋರಂನ ಆಗ್ರಹವಾಗಿದೆ. ಈ ಸಂಬಂಧ 2017ರಲ್ಲೇ ಊರ್ಜಿತ್ ಪಟೇಲ್ ಅವರು ಬರೆದಿದ್ದ ಪತ್ರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.