ಮಧುಕರ್ ಶೆಟ್ಟಿ ನಿಧನಕ್ಕೆ ರವಿ ಡಿ. ಚನ್ನಣ್ಣನವರ್ ಕಂಬನಿ ಮಿಡಿದಿದ್ದು ಹೀಗೆ

By Web DeskFirst Published Dec 29, 2018, 3:42 PM IST
Highlights

ಐಪಿಎಸ್​ ಅಧಿಕಾರಿ ಮಧುಕರ್ ಶೆಟ್ಟಿ ಅನಾರೋಗ್ಯದಿಂದ ಕೊನೆ ಉಸಿರೆಳೆದಿದ್ದಾರೆ. ಮಧುಕರ್ ಶೆಟ್ಟಿ ನಿಧನಕ್ಕೆ ಐಪಿಎಸ್​ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. 

ಬೆಂಗಳೂರು :   ಐಪಿಎಸ್​ ಅಧಿಕಾರಿ ಮಧುಕರ್ ಶೆಟ್ಟಿ ಹೈದರಾಬಾದ್​​​​ನಲ್ಲಿ ಕೊನೆ ಉಸಿರೆಳೆದಿದ್ದಾರೆ.  ಎಚ್​1ಎನ್​1, ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಮಧುಕರ್ ಶೆಟ್ಟಿ  ಹೈದರಾಬಾದ್​​​​ನ ಕಾಂಟಿನೆಂಟಲ್​​ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ದಕ್ಷ ಅಧಿಕಾರಿಯ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ದಕ್ಷ ಅಧಿಕಾರಿಯನ್ನು ಕಳೆದುಕೊಂಡು ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. 

ಮಧುಕರ್ ಶೆಟ್ಟಿ ನಿಧನಕ್ಕೆ ಐಪಿಎಸ್​ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. 

ಅತ್ಯಂತ ಸಜ್ಜನ , ಶುದ್ಧ ಹಸ್ತ, ಕರ್ತವ್ಯವೇ ದೇವರೆಂದು ತಿಳಿದ ಮಹಾನ್ ಮಾನವತಾವಾದಿಯಾಗಿದ್ದ ನಮ್ಮೆಲ್ಲರ ನಲ್ಮೆಯ ಶ್ರೀ ಮಧುಕರ ಶೆಟ್ಟಿ ಅವರ ಆತ್ಮಕ್ಕೆ ಶಾಂತಿ ದೊರಕಲಿ. 

ಸರ್ ನಿಮ್ಮ ಅಕಾಲಿಕ ಮರಣ ನಮಗೆ ನೋವುಂಟು ಮಾಡಿದೆ. ಇವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ದೇವರು ಕರುಣಿಸಲಿ ಎಂದು ಟ್ವೀಟ್ ಮಾಡಿದ್ದಾರೆ. 

 

ಅತ್ಯಂತ ಸಜ್ಜನ, ಶುದ್ಧ ಹಸ್ತ, ಕರ್ತವ್ಯವೇ ದೇವರೆಂದು ತಿಳಿದ ಮಹಾನ್ ಮಾನವತಾವಾದಿಯಾಗಿದ್ದ ನಮ್ಮೆಲ್ಲರ ನಲ್ಮೆಯ ಶ್ರೀ. ಮಧುಕರ ಶೆಟ್ಟಿ ಯವರ ಆತ್ಮಕ್ಕೆ ‌ಶಾಂತಿ ದೊರಕಲಿ.

ಸರ್ ನಿಮ್ಮ ಅಕಾಲಿಕ ಮರಣ ನಮಗೆ ನೋವುಂಟು ಮಾಡಿದೆ. ಇವರ ಅಗಲಿಕೆ‌ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ದೇವರು ಕರುಣಿಸಲಿ. 🙏🏻💐 pic.twitter.com/JHZ902eLEx

— Ravi D Channannavar, IPS (@DCPWestBCP)

1 ವಾರದಿಂದ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. 1999ರ ಬ್ಯಾಚ್​​ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ   ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಾಮರಾಜನಗರ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆ ಸೇರಿ ರಾಜ್ಯದ ಹಲವೆಡೆ ಸೇವೆ ಸಲ್ಲಿಸಿದ್ದರು.

click me!