
ಬೆಂಗಳೂರು (ನ.30): ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ವಿಧಾನಸಭಾದಲ್ಲಿಂದು ರತ್ನಪ್ರಭಾ ಅಧಿಕಾರ ಸ್ವೀಕರಿಸಿದ್ದಾರೆ.
ಸುಭಾಷ್ ಕುಂಟಿಯಾ ಅವರ ಅಧಿಕಾರಾವಧಿ ಇಂದು ಮುಕ್ತಾಯಗೊಂಡಿದ್ದು, ರತ್ನಪ್ರಭಾ ಸಿಎಸ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಜನರ ಪ್ರೀತಿಯಿಂದ ನನ್ನ ಜವಾಬ್ದಾರಿ ಹೆಚ್ಚಿದೆ. ಬೀದರ್, ರಾಯಚೂರು, ಗುಲ್ಬರ್ಗಾ ಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಹೆಮ್ಮೆಪಡುವಂತಹ ಜವಾಬ್ದಾರಿ ದೊರೆತಿದೆ. ಜನರೊಂದಿಗೆ ಸಂಪರ್ಕವಿಟ್ಟುಕೊಂಡು ಆಡಳಿತ ನಡೆಸುವುದು ನನ್ನ ಆದ್ಯತೆ. ಆಡಳಿತದಲ್ಲಿ ಬದಲಾವಣೆ ತರುವುದು ನನ್ನ ಉದ್ದೇಶ. ಜನರ ನಿರೀಕ್ಷೆಯ ಮಟ್ಟ ಮುಟ್ಟುವುದು ನನ್ನ ಉದ್ದೇಶ. ನಾನು ಯಾವಾಗಲೂ ಭಾವುಕ ಮಹಿಳೆ. ಇಂದು ಜನರು ತೋರಿದ ಪ್ರೀತಿ ನನ್ನನ್ನು ಭಾವುಕಳನ್ನಾಗಿಸಿದೆ ಎಂದು ರತ್ನಪ್ರಭಾ ಅಧಿಕಾರ ಸ್ವೀಕರಿಸಿದ ಬಳಿಕ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.