ಗ್ರಾಮದಿಂದ ನಾಪತ್ತೆಯಾದ ಎಮ್ಮೆಗಳು ಫೇಸ್'ಬುಕ್ ಮೂಲಕ ಪತ್ತೆ

Published : Nov 30, 2017, 05:34 PM ISTUpdated : Apr 11, 2018, 12:42 PM IST
ಗ್ರಾಮದಿಂದ ನಾಪತ್ತೆಯಾದ ಎಮ್ಮೆಗಳು ಫೇಸ್'ಬುಕ್ ಮೂಲಕ ಪತ್ತೆ

ಸಾರಾಂಶ

ಸುನಂದಮ್ಮ ಕಳೆದ ಸೋಮವಾರ ತಮ್ಮ ಎರಡು ಎಮ್ಮೆಗಳನ್ನ ಮೇಯಿಸಲು ಗ್ರಾಮದ ಹೊರವಲಯಕ್ಕೆ ಹೋಗಿದ್ದಾಗ ಎಮ್ಮೆಗಳು ತಪ್ಪಿಸಿಕೊಂಡು ಹೊಗಿದ್ದವು. ಕುಟುಂಬಸ್ಥರು 2 ದಿನಗಳಿಂದ ಸುತ್ತಮುತ್ತಲಿನ ಗ್ರಾಮಗಳಲೆಲ್ಲ ಹುಡುಕಾಡಿದರೂ ಸಿಕ್ಕಿರಲಿಲ್ಲ.

ಕಳೆದ ಸೋಮವಾರ ಗ್ರಾಮದಿಂದ ತಪ್ಪಿಸಿಕೊಂಡು ಹೊಗಿದ್ದು ಎಮ್ಮೆಗಳು ಫೇಸ್'ಬುಕ್ ಮುಖಾಂತರ ಪತ್ತೆಯಾಗಿರೂ ಅಪರೂಪದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಈಸ್ತೂರು ಗ್ರಾಮದಲ್ಲಿ ನಡೆದಿದೆ.

ಈಸ್ತೂರು ಗ್ರಾಮದ ನಿವಾಸಿಗಳಾದ ನಾರಾಯಣಸ್ವಾಮಿ ಮತ್ತು ಸುನಂದಮ್ಮ ಎಂಬುವರು ಕಳೆದ ಹಲವು ವರ್ಷಗಳಿಂದ ಎಮ್ಮೆ ಮೇಯಿಸುತ್ತಾ ಜೀವನ ಸಾಗಿಸುತ್ತಿದ್ದರು. ಸುನಂದಮ್ಮ ಕಳೆದ ಸೋಮವಾರ ತಮ್ಮ ಎರಡು ಎಮ್ಮೆಗಳನ್ನ ಮೇಯಿಸಲು ಗ್ರಾಮದ ಹೊರವಲಯಕ್ಕೆ ಹೋಗಿದ್ದಾಗ ಎಮ್ಮೆಗಳು ತಪ್ಪಿಸಿಕೊಂಡು ಹೊಗಿದ್ದವು. ಕುಟುಂಬಸ್ಥರು 2 ದಿನಗಳಿಂದ ಸುತ್ತಮುತ್ತಲಿನ ಗ್ರಾಮಗಳಲೆಲ್ಲ ಹುಡುಕಾಡಿದರೂ ಸಿಕ್ಕಿರಲಿಲ್ಲ.

ಈ ವೇಳೆ ಈಸ್ತೂರಿನಿಂದ 12 ಕಿಲೋ ಮೀಟರ್ ದೂರದಲ್ಲಿರುವ ಕೊಂಡ್ರಹಳ್ಳಿಯಲ್ಲಿ ಇದೇ ಎಮ್ಮೆಗಳು ರಸ್ತೆಯಲ್ಲಿ ಅಡ್ಡದಿಡ್ಡಿ ಹೋಡಾಡುತ್ತಿದ್ದವು. ಅದೇ ವೇಳೆ ಗ್ರಾಮದ ಯುವಕ ಮೋಹನ್ ಎಮ್ಮೆಗಳನ್ನು ಕಟ್ಟಿಹಾಕಿ ಇವು ಯಾರದು ಎಂದು ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿಚಾರಿಸಿದ್ದಾನೆ. ಆದರೆ ಎಲ್ಲೂ ಎಮ್ಮೆಗಳ ಮಾಲೀಕರು ಪತ್ತೆಯಾಗದ ಕಾರಣ ಫೋಟೊ ತೆಗೆದು  ಫೇಸ್'ಬುಕ್'ನಲ್ಲಿ ಪೋಸ್ಟ್ ಮಾಡಿದ್ದಾನೆ‌.

ಫೇಸ್'ಬುಕ್'ನಲ್ಲಿ ನೋಡಿದ ಮಾಲೀಕ ನಾರಾಯಣ ಸ್ವಾಮಿ ಅವರ ತಮ್ಮನ ಮಗ ನಾಗೇಶ್ ಮೋಹನ್ ಅವರಿಗೆ ಕರೆ ಮಾಡಿ ಎಮ್ಮೆಗಳನ್ನು ಮರಳಿ ಕರೆತರುವಲ್ಲಿ ಸಹಾಯಮಾಡಿದ್ದಾನೆ. ಈ ಮೂಲಕ ಕಳೆದುಹೋಗಿದ್ದ ಎಮ್ಮೆಗಳು ಫೇಸ್'ಬುಕ್' ಸಹಾಯದಿಂದ ವಾಪಸ್ ಬಂದಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌