2 ಪ್ರಕರಣಗಳಲ್ಲಿ ರಾಮ್'ಪಾಲ್ ಬಾಬಾ ಖುಲಾಸೆ; ಆದ್ರೆ ಜೈಲಿಂದ ಬಿಡುಗಡೆ ಭಾಗ್ಯವಿಲ್ಲ

Published : Aug 29, 2017, 02:55 PM ISTUpdated : Apr 11, 2018, 12:55 PM IST
2 ಪ್ರಕರಣಗಳಲ್ಲಿ ರಾಮ್'ಪಾಲ್ ಬಾಬಾ ಖುಲಾಸೆ; ಆದ್ರೆ ಜೈಲಿಂದ ಬಿಡುಗಡೆ ಭಾಗ್ಯವಿಲ್ಲ

ಸಾರಾಂಶ

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸತ್'ಲೋಕ್ ಆಶ್ರಮದ ಮುಖ್ಯಸ್ಥ ರಾಮ್'ಪಾಲ್ ಬಾಬಾ ಖುಲಾಸೆಯಾಗಿದ್ದಾರೆ. ಹಿಸಾರ್'ನ ವಿಶೇಷ ನ್ಯಾಯಾಲಯವು ಬಾಬಾ ರಾಮಪಾಲ್'ರನ್ನು ಆರೋಪಮುಕ್ತಗೊಳಿಸಿ ತೀರ್ಪು ನೀಡಿದೆ. 2014ರಲ್ಲಿ ಸತ್'ಲೋಕ್ ಆಶ್ರಮದಲ್ಲಿ ರಾಮ್'ಪಾಲ್ ಅವರನ್ನು ಪೊಲೀಸರು ಬಂಧಿಸಲು ಹೋದಾಗ ಸಂಭವಿಸಿದ ದಾಂಧಲೆ ಹಾಗೂ ಆ ಸಂದರ್ಭದಲ್ಲಿ ಸರಕಾರೀ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಸಂಬಂಧ ಎರಡು ಪ್ರಕರಣಗಳಲ್ಲಿ ಬಾಬಾ ಖುಲಾಸೆಯಾಗಿದ್ದಾರೆ.​

ರೋಹ್ಟಕ್(ಆ. 29): ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸತ್'ಲೋಕ್ ಆಶ್ರಮದ ಮುಖ್ಯಸ್ಥ ರಾಮ್'ಪಾಲ್ ಬಾಬಾ ಖುಲಾಸೆಯಾಗಿದ್ದಾರೆ. ಹಿಸಾರ್'ನ ವಿಶೇಷ ನ್ಯಾಯಾಲಯವು ಬಾಬಾ ರಾಮಪಾಲ್'ರನ್ನು ಆರೋಪಮುಕ್ತಗೊಳಿಸಿ ತೀರ್ಪು ನೀಡಿದೆ. 2014ರಲ್ಲಿ ಸತ್'ಲೋಕ್ ಆಶ್ರಮದಲ್ಲಿ ರಾಮ್'ಪಾಲ್ ಅವರನ್ನು ಪೊಲೀಸರು ಬಂಧಿಸಲು ಹೋದಾಗ ಸಂಭವಿಸಿದ ದಾಂಧಲೆ ಹಾಗೂ ಆ ಸಂದರ್ಭದಲ್ಲಿ ಸರಕಾರೀ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಸಂಬಂಧ ಎರಡು ಪ್ರಕರಣಗಳಲ್ಲಿ ಬಾಬಾ ಖುಲಾಸೆಯಾಗಿದ್ದಾರೆ. ಆದರೆ, ರಾಮ್'ಪಾಲ್ ವಿರುದ್ಧ ಇನ್ನೂ ಅನೇಕ ಪ್ರಕರಣಗಳು ದಾಖಲಾಗಿವೆ. ಸತ್'ಲೋಕ್ ಆಶ್ರಮದೊಳಗೆ 6 ಭಕ್ತರ ನಿಗೂಢ ಸಾವು; 2006ರಲ್ಲಿ ನಡೆದ ಕೊಲೆ; ವಂಚನೆ ಮೊದಲಾದ ಹಲವು ಪ್ರಕರಣಗಳಲ್ಲಿ ಕೋರ್ಟ್ ಇನ್ನೂ ವಿಚಾರಣೆ ನಡೆಸುತ್ತಿದೆ. ಹೀಗಾಗಿ, ಆ ಪ್ರಕರಣಗಳು ಇತ್ಯರ್ಥವಾಗುವವರೆಗೂ ರಾಮ್'ಪಾಲ್ ಬಾಬಾ ಇನ್ನೂ ಜೈಲಿನಲ್ಲೇ ಇರಬೇಕಾಗುತ್ತದೆ. 2014ರಲ್ಲಿ ಅವರನ್ನು ಬಂಧಿಸಲಾಗಿತ್ತು.

2006ರಲ್ಲಿ ರಾಮ್'ಪಾಲ್ ಬಾಬಾ ವಿರುದ್ಧ ಮೊದಲು ಕೊಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆಗೆ ಸತತ 43 ಬಾರಿ ರಾಮ್‌‌'ಪಾಲ್‌ ಗೈರಾಗಿದ್ದ. ಈ ಹಿನ್ನೆಲೆಯಲ್ಲಿ 2014ರಲ್ಲಿ ಈತನನ್ನು ಅರೆಸ್ಟ್‌ ಮಾಡಲು ಆದೇಶ ಹೊರಡಿಸಲಾಗಿತ್ತು. ಈ ಬಂಧನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಈ ರಾಮ್‌'ಪಾಲ್‌ ಹರಿಯಾನದ ರೋಹ್ಟಕ್'ನಲ್ಲಿನ ತನ್ನ ಸತ್ಲೋಕ್ ಆಶ್ರಮದಲ್ಲಿ ಬೆಂಬಲಿಗರನ್ನೇ ಗುರಾಣಿಯಾಗಿಟ್ಟುಕೊಂಡಿದ್ದ. ಪೋಲೀಸರು ಆಶ್ರಮ ಪ್ರವೇಶಿಸುವುದನ್ನು ತಡೆಯುವ ಸಲುವಾಗಿ ಎಲ್ಲ ರೀತಿಯ ರಣತಂತ್ರ ರೂಪಿಸಿದ್ದ ಈತ, ಆಶ್ರಮದಲ್ಲೇ ಅವಿತುಕೊಂಡು ಹಿಂಸೆಗೆ ಪ್ರಚೋದನೆ ನೀಡುತ್ತಿದ್ದ. ಪೊಲೀಸರು ಪಟ್ಟುಬಿಡದೇ ಆಶ್ರಮಕ್ಕೆ ನುಗ್ಗಿದಾಗ ಸಂಭವಿಸಿದ ಹಿಂಸಾಚಾರದಲ್ಲಿ 18 ತಿಂಗಳ ಹಸುಗೂಸು ಸೇರಿದಂತೆ 6 ಅಮಾಯಕ ಮಹಿಳೆಯರು ಸಾವಿಗೀಡಾಗಿದ್ದರು. ಅಂದಾಜು 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.  ಕೊನೆಗೂ ಸತತ 2 ದಿನಗಳ ಕಾರ್ಯಾಚರಣೆ ಬಳಿಕ ರಾಮ್‌'ಪಾಲ್‌ನನ್ನು  ಪೊಲೀಸರು ಆಶ್ರಮದಲ್ಲಿಯೇ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

2014ರ ನವೆಂಬರ್ 18ರಂದು ರಾಮ್'ಪಾಲ್ ಮತ್ತವರ ಬೆಂಬಲಿಗರ ವಿರುದ್ಧ ಐಪಿಸಿ 186, 332 ಮತ್ತು 253 ಸೆಕ್ಷನ್'ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಹಿಸಾರ್'ನ ಸೆಂಟ್ರಲ್ ಜೈಲಿನಲ್ಲಿ ಪ್ರಕರಣದ ತ್ವರಿತ ವಿಚಾರಣೆಗೆ ವಿಶೇಷ ಕೋರ್ಟ್ ಸ್ಥಾಪನೆ ಮಾಡಲಾಯಿತು. ಪ್ರತೀ ವಿಚಾರಣೆಯಲ್ಲೂ ಬಾಬಾ ರಾಮಪಾಲ್'ನ ಬೆಂಬಲಿಗರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಅಡಚಣೆಗೆ ಯತ್ನಿಸುವುದು ನಡೆದೇ ಇತ್ತು.

ಆಗಸ್ಟ್ 24ರಂದು ರಾಮಪಾಲ್ ಪ್ರಕರಣದ ತೀರ್ಪು ನೀಡಲು ನಿಗದಿಯಾಗಿತ್ತು. ಆದರೆ, ರಾಮ್ ರಹೀಮ್ ಸಿಂಗ್ ಪ್ರಕರಣದ ತೀರ್ಪು ಆ. 25ಕ್ಕೆ ನಿಗದಿಯಾಗಿದ್ದರಿಂದ ರಾಮಪಾಲ್ ಪ್ರಕರಣದ ತೀರ್ಪನ್ನು ಇವತ್ತಿಗೆ ಮುಂದೂಡಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!