ಜಿಗಜಿಣಗಿ ಆಪ್ತ ಕಾರ್ಯದರ್ಶಿಯಾಗಿ ಚೌಧರಿ ನಿಯೋಜನೆ

Published : Sep 29, 2016, 04:30 PM ISTUpdated : Apr 11, 2018, 12:45 PM IST
ಜಿಗಜಿಣಗಿ ಆಪ್ತ ಕಾರ್ಯದರ್ಶಿಯಾಗಿ ಚೌಧರಿ ನಿಯೋಜನೆ

ಸಾರಾಂಶ

ಬೆಂಗಳೂರು (ಸೆ.29): ಹುದ್ದೆಯ ನಿರೀಕ್ಷೆಯಲ್ಲಿದ್ದ ರಾಜ್ಯದ ಕೇಡರ್‌ನ ಐಎಎಸ್‌ ಅಧಿಕಾರಿ ರಮಣದೀಪ್‌ ಚೌಧರಿ ಅವರನ್ನು ಕೇಂದ್ರ ನೀರು ಸರಬರಾಜು ಹಾಗೂ ನೈರ್ಮಲ್ಯ ಖಾತೆ ಸಚಿವ ರಮೇಶ್‌ ಜಿಗಜಿಣಗಿ ಅವರ ಆಪ್ತ ಕಾರ್ಯದರ್ಶಿಯಾಗಿ ನಿಯೋಜನೆಗೊಳಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

ಐಎಎಸ್‌ ಅಧಿಕಾರಿ ವಯೋ ನಿವೃತ್ತಿಯಿಂದ ತೆರವಾದ ಸಹಕಾರ ಇಲಾಖೆ ಕಾರ್ಯದರ್ಶಿ ಹುದ್ದೆಯನ್ನು ಕೃಷಿ ಇಲಾಖೆ ಕಾರ್ಯದರ್ಶಿ ಅವರಿಗೆ ಹೆಚ್ಚುವರಿಯಾಗಿ ಹಾಗೂ ಮೈಸೂರು ಪ್ರಾದೇಶಿಕ ಆಯುಕ್ತ ಎಂ.ಎ.ಕುಂಜಪ್ಪ ಅವರ ನಿವೃತ್ತಿಯಿಂದ ತೆರವಾದ ಸ್ಥಾನವನ್ನು ಬೆಂಗಳೂರು ಪ್ರಾದೇಶಿಕ ಆಯುಕ್ತರಿಗೆ ಹೆಚ್ಚುವರಿಯಾಗಿ ಮತ್ತು ಎನ್‌.ಎಂ.ಪನಾಲಿ ಅವರ ನಿವೃತ್ತಿಯಿಂದ ತೆರವಾದ ಅಂತರ್ಜಾಲ ನಿರ್ದೇಶಕ ಹುದ್ದೆಯನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕರಿಗೆ ಹೆಚ್ಚುವರಿಯಾಗಿ ವಹಿಸಿ, ಸರ್ಕಾರ ಆದೇಶಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India Latest News Live: ಸರ್ಕಾರಿ ನೌಕರಿಯಿಂದ ಹಿಂದೂಗಳಿಗೆ ಕೊಕ್‌; ಭಾರತೀಯ ಏಜೆಂಟ್‌ಗಳೆಂದು ನಿಂದನೆ
Karnataka News Live: ರಾಜ್ಯದಲ್ಲಿನ ಸಿಎಂ ಕುರ್ಚಿ ಗೊಂದಲ: ಕೋಡಿಮಠದ ಶ್ರೀಗಳಿಂದ ಅಚ್ಚರಿಯ ಭವಿಷ್ಯ