
ಬೆಂಗಳೂರು(ಫೆ.01): ಬಿಜೆಪಿ ನಾಯಕ ಆರ್. ಅಶೋಕ್ ಒಬ್ಬರೆ ಸತ್ಯ ಹರಿಶ್ಚಂದ್ರರು ನಾನು ಅವರ ಡಿಎನ್'ಎ ಟೆಸ್ಟ್ ಮಾಡಿಸಿದ್ದೀನಿ. ಅವರು ಸತ್ಯ ಹರಿಶ್ಚಂದ್ರರ ಸಂಬಂಧಿಕರು ಎಂದು ಡಿಎನ್'ಎ ಟೆಸ್ಟ್ ಬಳಿಕ ಗೊತ್ತಾಗಿದೆ. ನಾವು ಆಗಾಗ ಸುಳ್ಳು ಹೇಳುತ್ತೇವೆ. ಅಶೋಕ್ ಅವರು ಸುಳ್ಳು ಹೇಳೋದೆ ಇಲ್ಲ' ಎಂದು ಮಾಜಿ ಉಪ ಮುಖ್ಯಮಂತ್ರಿಯ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದರು.
ಓವೈಸಿ ಜೊತೆ ಬಿಜೆಪಿ ನಾಯಕರ ಮಾತುಕತೆ ಬಗ್ಗೆ ವಿಚಾರ ಪ್ರಸ್ತಾಪಿಸಿದ ಅವರು, ಅಶೋಕ್ ಗೃಹ ಸಚಿವರಾಗಿದ್ದಾಗಲೇ ಅತಿ ಹೆಚ್ಚು ಕೊಲೆಗಳಾಗಿವೆ. ನಮ್ಮ ಅವಧಿಯಲ್ಲಿ ಅಷ್ಟೋಂದು ಹತ್ಯೆಗಳಾಗಿಲ್ಲಾ. ಈ ಬಗ್ಗೆ ಬಹಿರಂಗ ಚರ್ಚೆ ನಡೆಸಲು ಸಿದ್ಧ. ನಾನು ಸುಳ್ಳು ಹೇಳ್ತೇನೆ ಎಂದು ಅವರು ಆರೋಪ ಮಾಡ್ತಾರೆ. ಅಶೋಕ್ ಮಾತ್ರವಲ್ಲ, ಶೋಭಾ, ಸಿ.ಟಿ ರವಿ ಕೂಡ ಸತ್ಯಹರಿಶ್ಚಂದ್ರ ವಂಶಸ್ಥರು. ಅವರೆಲ್ಲರೂ ಎಂದೂ ಅಪ್ಪಿತಪ್ಪಿಯೂ ಸುಳ್ಳು ಹೇಳುವುದಿಲ್ಲಾ. ಇವರನ್ನು ಡಿಎನ್'ಎ ಪರೀಕ್ಷೆಗೆ ಒಳಪಡಿಸಬೇಕು' ಎಂದು ವ್ಯಂಗ್ಯವಾಗಿವೇ ಟೀಕಾ ಪ್ರಹಾರ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.