ಶ್ರೀರಾಮ, ಸೀತೆ ಕೂಡ ಗೋಮಾಂಸ ತಿನ್ನುತ್ತಿದ್ದರು

Published : Jan 25, 2018, 05:11 PM ISTUpdated : Apr 11, 2018, 01:08 PM IST
ಶ್ರೀರಾಮ, ಸೀತೆ ಕೂಡ ಗೋಮಾಂಸ ತಿನ್ನುತ್ತಿದ್ದರು

ಸಾರಾಂಶ

ರಾಮ-ಸೀತೆ ಕೂಡ ಗೋಮಾಂಸ ಸೇವಿಸುತ್ತಿದ್ದರು ಎಂದು ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣದಲ್ಲಿದೆ ಆಹಾರ ಸಂಸ್ಕೃತಿ ಪ್ರಶ್ನಿಸುವ ಹಕ್ಕು ಯಾರಿಗೂ ನೀಡಿಲ್ಲ. ಪೂರ್ವಜ ಋಷಿಮುನಿಗಳೂ ಗೋಮಾಂಸ ತಿನ್ನುತ್ತಿದ್ದರು.

ಬಳ್ಳಾರಿ: ರಾಮ-ಸೀತೆ ಕೂಡ ಗೋಮಾಂಸ ಸೇವಿಸುತ್ತಿದ್ದರು ಎಂದು ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣದಲ್ಲಿದೆ. ಆಹಾರ ಸಂಸ್ಕೃತಿಯನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಯಜ್ಞ-ಯಾಗಾದಿಗಳಲ್ಲೂ ಗೋಮಾಂಸ ಭಕ್ಷಣೆ ಇತ್ತು. ಆದರೆ, ಆರೆಸ್ಸೆಸ್ ಹಿಡಿತದಲ್ಲಿರುವ ಬಿಜೆಪಿಯವರು ರಾಜಕೀಯ ಹಿತಾಸಕ್ತಿಗಾಗಿ ಸಾಂಸ್ಕೃತಿಕ ಸರ್ವಾಧಿಕಾರ ನಡೆಸುತ್ತಿದ್ದು, ಇದು ಪ್ರಜಾಪ್ರಭುತ್ವಕ್ಕೆ ಬಂದೊದಗಿದ ಬಹುದೊಡ್ಡ ಅಪಾಯ ಎಂದು ನಿಡುಮಾಮಿಡಿ ವೀರಭದ್ರಚನ್ನಮಲ್ಲ ಸ್ವಾಮೀಜಿ ಹೇಳಿದ್ದಾರೆ.

ಸೌಹಾರ್ದಕ್ಕಾಗಿ ಕರ್ನಾಟಕ ಸಮಿತಿಯಿಂದ ಜ.30ರಂದು ಹಮ್ಮಿಕೊಂಡಿರುವ ರಾಜ್ಯಾದ್ಯಂತ ಮಾನವ ಸರಪಳಿ ಆಂದೋಲನ ಅಂಗವಾಗಿ ಇಲ್ಲಿನ ರಾಘವಕಲಾ ಮಂದಿ ರದಲ್ಲಿ ಜರುಗಿದ ಪೂರ್ವ ಸಿದ್ಧತಾ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿ, ಆಹಾರ ಸಂಸ್ಕೃತಿ ಪ್ರಶ್ನಿಸುವ ಹಕ್ಕು ಯಾರಿಗೂ ನೀಡಿಲ್ಲ. ಪೂರ್ವಜ ಋಷಿಮುನಿಗಳೂ ಗೋಮಾಂಸ ತಿನ್ನುತ್ತಿದ್ದರು. ಆಗ ತಿನ್ನುತ್ತಿದ್ದವರು ಮಾತ್ರ ಪೂಜ್ಯರು, ಈಗಿನವರು ತ್ಯಾಜ್ಯರು ಹೇಗಾಗುತ್ತಾರೆ ಎಂದರು.

ಈ ಹಿಂದೆ, ಎಲ್ಲಾ ಶಿವಭಕ್ತರು ಹಿಂದೂಗಳಲ್ಲ ಎಂಬ ವಿಭಿನ್ನ ತರ್ಕವನ್ನು ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಪ್ರತಿಪಾದಿಸಿದ್ದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

International Yoga day: 5000 ವರ್ಷಗಳ ಇತಿಹಾಸವಿರುವ ಯೋಗದಲ್ಲಿ ಅಡಗಿದೆ ರಹಸ್ಯ, ಇದು ತಿಳಿದವರೇ ಸುಖಿ, ಆರೋಗ್ಯವಂತರು!
Prakash Raj in Trouble: ನಟ ಪ್ರಕಾಶ್ ರಾಜ್ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್; ಇದೀಗ ಬಂಧನದ ಭೀತಿ!