ಕನ್ನಡ ಪತ್ರಕರ್ತರಾಗಿದ್ದರು ನಟ ರಜನಿಕಾಂತ್

Published : Jan 03, 2018, 09:17 AM ISTUpdated : Apr 11, 2018, 12:35 PM IST
ಕನ್ನಡ ಪತ್ರಕರ್ತರಾಗಿದ್ದರು ನಟ ರಜನಿಕಾಂತ್

ಸಾರಾಂಶ

ನಾನು ಕೂಡ ಒಂದು ಸಮಯದಲ್ಲಿ ಪತ್ರಕರ್ತ ನಾಗಿದ್ದೆ. ಬೆಂಗಳೂರಿನ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರೂಫ್ ರೀಡರ್ ಆಗಿಯೂ ಸೇವೆ ಸಲ್ಲಿಸಿದ್ದೆ. ಕಂಡಕ್ಟರ್ ಆದ ಮೇಲೆ ಸಿನಿಮಾ ರಂಗ ಸೆಳೆಯಿತು. ಅಲ್ಲಿಂದ ಇಲ್ಲಿಯವರೆಗೂ ಸಾಗಿ ಬಂದಿದ್ದೇನೆ ಎಂದು ರಜನಿ ತಮ್ಮ ಗತ ವೈಭವದ ದಿನ ಮೆಲುಕು ಹಾಕಿದ್ದಾರೆ.

ಚೆನ್ನೈ: ರಾಜಕೀಯಕ್ಕೆ ಅಧಿಕೃತವಾಗಿ ಪ್ರವೇಶಿಸಿರುವ ನಟ ರಜನಿಕಾಂತ್ ಬುಧವಾರ ಪತ್ರಕರ್ತರ ಜತೆ ಮನ ಬಿಚ್ಚಿ ಮಾತನಾಡಿದ್ದಾರೆ. ‘ನಾನು ಕೂಡ ಒಂದು ಸಮಯದಲ್ಲಿ ಪತ್ರಕರ್ತ ನಾಗಿದ್ದೆ. ಬೆಂಗಳೂರಿನ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರೂಫ್ ರೀಡರ್ ಆಗಿಯೂ ಸೇವೆ ಸಲ್ಲಿಸಿದ್ದೆ. ಕಂಡಕ್ಟರ್ ಆದ ಮೇಲೆ ಸಿನಿಮಾ ರಂಗ ಸೆಳೆಯಿತು. ಅಲ್ಲಿಂದ ಇಲ್ಲಿಯವರೆಗೂ ಸಾಗಿ ಬಂದಿದ್ದೇನೆ ಎಂದು ರಜನಿ ತಮ್ಮ ಗತ ವೈಭವದ ದಿನ ಮೆಲುಕು ಹಾಕಿದ್ದಾರೆ.

ರಾಜಕೀಯ ಕ್ರಾಂತಿ ಅಗತ್ಯವಿದೆ: ಈಗ ತಮಿಳುನಾಡಿನಲ್ಲಿ ಕ್ರಾಂತಿಯ ಅಗತ್ಯವಿದೆ. ಅದನ್ನು ಮಾಡಲು ಪ್ರಯತ್ನಿಸುತ್ತಿದ್ದೇನೆ. ಇದಕ್ಕಾಗಿ ಕೆಲವು ಕಾರ್ಯತಂತ್ರಗಳನ್ನು ರೂಪಿಸಲಾಗುತ್ತಿದೆ. ಮುಂದಿನ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಲ್ಲ 234 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕಾಗಿದೆ ಎಂದು ರಜನಿ ತಿಳಿಸಿದರು.

ಈ ನಡುವೆ ರಜನಿ ಹೇಳಿಕೆ ಕುರಿತು ಪತ್ರಿಕೆಯ ಮೂಲಗಳನ್ನು ಸಂಪರ್ಕಿಸಿದ ವೇಳೆ, ರಜನಿ ಗೆಳೆಯ ರಾಮಚಂದ್ರರಾವ್ ಪ್ರೂಫ್ ರೀಡರ್ ಆಗಿದ್ದರು. ಅವರನ್ನು ಭೇಟಿ ಮಾಡಲು ಬಂದಾಗ,ರಜನಿ ನೆರವಾಗುತ್ತಿದ್ದರು ಎಂದು ಹೇಳಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ