ಜಲ್ಲಿಕಟ್ಟು ಪ್ರತಿಭಟನೆ: ರಜನೀಕಾಂತ್ ಎಂಟ್ರಿ; ಜನರ ಪರ ಒಂದಾಯ್ತು ಇಡೀ ತಮಿಳುನಾಡು ಚಿತ್ರರಂಗ

Published : Jan 20, 2017, 09:56 AM ISTUpdated : Apr 11, 2018, 01:10 PM IST
ಜಲ್ಲಿಕಟ್ಟು ಪ್ರತಿಭಟನೆ: ರಜನೀಕಾಂತ್ ಎಂಟ್ರಿ; ಜನರ ಪರ ಒಂದಾಯ್ತು ಇಡೀ ತಮಿಳುನಾಡು ಚಿತ್ರರಂಗ

ಸಾರಾಂಶ

ಶಾಂತಿಯುತ ಹೋರಾಟಕ್ಕೆ ರಜನೀ ಬೇಷರತ್ತಿನ ಬೆಂಬಲ ನೀಡಿದ್ದಾರೆ. ರಜನೀಕಾಂತ್ ಅಷ್ಟೇ ಅಲ್ಲ, ಕಾಲಿವುಡ್'ನ ಬಹುತೇಕ ಸೆಲಬ್ರಿಟಿಗಳು ಜಲ್ಲಿಕಟ್ಟು ಪರ ನಿಂತಿದ್ದಾರೆ.

ಚೆನ್ನೈ(ಜ. 20): ಜಲ್ಲಿಕಟ್ಟು ಮೇಲಿನ ನಿಷೇಧ ಹಿಂಪಡೆಯುವಂತೆ ಆಗ್ರಹಿಸಿ ತಮಿಳುನಾಡಿನಲ್ಲಿ ನಡೆಯುತ್ತಿರುವ ಬೃಹತ್ ಜನಾಂದೋಲನಕ್ಕೆ ಇಡೀ ತಮಿಳುನಾಡು ಚಿತ್ರರಂಗ ಒಂದಾಗಿದೆ. ಜಲ್ಲಿಕಟ್ಟು ಹೋರಾಟ ನಡೆಯುತ್ತಿರುವ ಇಲ್ಲಿಯ ಮರೀನಾ ಬೀಚ್'ಗೆ ಸೂಪರ್'ಸ್ಟಾರ್ ರಜನೀಕಾಂತ್ ಇಂದು ಆಗಮಿಸಿದ್ದಾರೆ. ಶಾಂತಿಯುತ ಹೋರಾಟಕ್ಕೆ ರಜನೀ ಬೇಷರತ್ತಿನ ಬೆಂಬಲ ನೀಡಿದ್ದಾರೆ. ರಜನೀಕಾಂತ್ ಅಷ್ಟೇ ಅಲ್ಲ, ಕಾಲಿವುಡ್'ನ ಬಹುತೇಕ ಸೆಲಬ್ರಿಟಿಗಳು ಜಲ್ಲಿಕಟ್ಟು ಪರ ನಿಂತಿದ್ದಾರೆ. ಸಂಗೀತ ದಿಗ್ಗಜ ಎಆರ್ ರೆಹ್ಮಾನ್ ಅವರು ಇಂದು ಸಂಜೆಯವರೆಗೂ ಉಪವಾಸ ನಡೆಸಿದ್ದಾರೆ. ಅಜಿತ್, ಧನುಶ್, ಶರತ್'ಕುಮಾರ್, ಸೂರ್ಯ ಮೊದಲಾದ ಸ್ಟಾರ್'ಗಳು ಜನಾಂದೋಲನಕ್ಕೆ ಬೆಂಬಲ ಸೂಚಿಸಿದ್ದಾರೆ.

ಮತ್ತೊಬ್ಬ ಸೂಪರ್'ಸ್ಟಾರ್ ಕಮಲ್ ಹಾಸನ್ ಅವರು ಜಲ್ಲಿಕಟ್ಟು ನಿಷೇಧಿಸಿರುವದೇ ಆದರೆ ಬಿರಿಯಾನಿಯನ್ನೂ ನಿಷೇಧಿಸಿ ಎಂದು ಹೇಳುವ ಮೂಲಕ ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆಗೆ ಬೆಂಬಲ ಸೂಚಿಸಿದ್ದರು. ಆದರೆ, ಕಮಲ್ ಹೇಳಿಕೆಗೆ ಬಿರ್ಯಾನಿ ಪ್ರಿಯರು ಬೇಸರ ವ್ಯಕ್ತಪಡಿಸಿದ್ದುಂಟು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!