ರಾಜಕೀಯ ಪ್ರವೇಶಕ್ಕೂ ಮುನ್ನ ರಜನಿ ಹಿಮಾಲಯ ಪ್ರವಾಸಕ್ಕೆ!

Published : Mar 11, 2018, 10:04 AM ISTUpdated : Apr 11, 2018, 12:46 PM IST
ರಾಜಕೀಯ ಪ್ರವೇಶಕ್ಕೂ ಮುನ್ನ ರಜನಿ ಹಿಮಾಲಯ ಪ್ರವಾಸಕ್ಕೆ!

ಸಾರಾಂಶ

ಕಳೆದ ಒಂದು ದಶಕಕ್ಕಿಂತಲೂ ಹೆಚ್ಚು ಅವಧಿಯಿಂದ ಹಿಮಾಲಯದ ತಪ್ಪಲಿನಲ್ಲಿ ಧ್ಯಾನದ ಅಭ್ಯಾಸ ಬೆಳೆಸಿಕೊಂಡಿರುವ ಸೂಪರ್‌ಸ್ಟಾರ್‌, ರಾಜಕಾರಣಿ ರಜನೀಕಾಂತ್‌ ಈ ವರ್ಷವೂ ತಮ್ಮ ವಾರ್ಷಿಕ ಪ್ರವಾಸ ಕೈಗೊಂಡಿದ್ದಾರೆ. ಧ್ಯಾನ ಮತ್ತು ಸಂತರೊಂದಿಗೆ ಕೆಲಕಾಲ ಬೆರೆಯುವುದಕ್ಕಾಗಿ ರಜನೀಕಾಂತ್‌ ಶನಿವಾರ ಉತ್ತರಾಖಂಡದ ದುನಾಗಿರಿಗೆ ಪ್ರವಾಸ ಕೈಗೊಂಡಿದ್ದಾರೆ.

ಚೆನ್ನೈ: ಕಳೆದ ಒಂದು ದಶಕಕ್ಕಿಂತಲೂ ಹೆಚ್ಚು ಅವಧಿಯಿಂದ ಹಿಮಾಲಯದ ತಪ್ಪಲಿನಲ್ಲಿ ಧ್ಯಾನದ ಅಭ್ಯಾಸ ಬೆಳೆಸಿಕೊಂಡಿರುವ ಸೂಪರ್‌ಸ್ಟಾರ್‌, ರಾಜಕಾರಣಿ ರಜನೀಕಾಂತ್‌ ಈ ವರ್ಷವೂ ತಮ್ಮ ವಾರ್ಷಿಕ ಪ್ರವಾಸ ಕೈಗೊಂಡಿದ್ದಾರೆ. ಧ್ಯಾನ ಮತ್ತು ಸಂತರೊಂದಿಗೆ ಕೆಲಕಾಲ ಬೆರೆಯುವುದಕ್ಕಾಗಿ ರಜನೀಕಾಂತ್‌ ಶನಿವಾರ ಉತ್ತರಾಖಂಡದ ದುನಾಗಿರಿಗೆ ಪ್ರವಾಸ ಕೈಗೊಂಡಿದ್ದಾರೆ.

ರಜನಿಯ ಈ ಹಿಂದಿನ ಹಿಮಾಲಯ ಪ್ರವಾಸಗಳು ಯಾವುದಾದರೂ, ವಿಶೇಷ ಸನ್ನಿವೇಶಕ್ಕೆ ಸಾಕ್ಷಿಯಾಗುತ್ತಿದ್ದವು. ಇದೀಗ ಅವರ ರಾಜಕೀಯ ಪ್ರವೇಶ, ಎರಡು ಪ್ರಮುಖ ಚಿತ್ರಗಳಾದ ಕಾಲಾ ಮತ್ತು 2.0 ಬಿಡುಗಡೆಯ ನಡುವೆಯೇ ರಜನಿ ಹಿಮಾಲಯದತ್ತ ಹೊರಟಿರುವುದು ವಿಶೇಷ ಮಹತ್ವ ಪಡೆದುಕೊಂಡಿದೆ.

ಪ್ರವಾಸದ ಉದ್ದೇಶ ತಿಳಿಸಲಿಲ್ಲವಾದರೂ, ತಾವು ಎರಡು ವಾರ ದೂರವಿರಲಿದ್ದೇನೆ ಎಂದು ರಜನೀಕಾಂತ್‌ ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಾತನಾಡುತ್ತಾ ತಿಳಿಸಿದ್ದಾರೆ. ಹಿಮಾಲಯದ ತಪ್ಪಲಲ್ಲಿ ತಮ್ಮ ಸ್ನೇಹಿತರು ನಿರ್ಮಿಸಿರುವ ಯೋಗೊದ ಸಾಷ್ಟಾಂಗ ಸೊಸೈಟಿ ಆಫ್‌ ಇಂಡಿಯಾದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ರಜನೀಕಾಂತ್‌ ಭಾಗವಹಿಸು ಸಾಧ್ಯತೆಯಿದೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಾಸನದ ತಿರುಪತಿಹಳ್ಳಿ ಬೆಟ್ಟದ ಮೇಲೆ 50ಕ್ಕೂ ಅಧಿಕ ಉಲ್ಕೆಗಳ ಸುರಿಮಳೆ!
India Latest News Live: ಪಹಲ್ಗಾಂ ಉಗ್ರ ದಾಳಿ: ಕೋರ್ಟ್‌ಗೆ 1597 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ