
ನವದೆಹಲಿ(ಡಿ.14): ಸಚಿವ ಎಚ್.ವೈ. ಮೇಟಿ ರಾಸಲೀಲೆ ವಿಡಿಯೋವನ್ನ ಬಹಿರಂಗಪಡಿಸಿರುವ ಆರ್`ಟಿಐ ಕಾರ್ಯಕರ್ತ ರಾಜಶೇಖರ್, ಇನ್ನೂ ಇಬ್ಬರು ಸಚಿವರು 3 ಶಾಸಕರ ದಾಖಲೆಗಳು ನನ್ನ ಬಳಿ ಇವೆ ಎಂದು ಹೇಳಿಕೆ ನೀಡಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ರಾಜಶೇಖರ್, ಮುಖ್ಯಮಂತ್ರಿಗಳು ಮೇಟಿಯನ್ನು ಪಕ್ಷದಿಂದ ವಜಾಗೊಳಿಸಬೇಕು ಮತ್ತು ಹೈಕಮಾಂಡ್ ಭೇಟಿಗೆ ಈಗಲಾದ್ರೂ ಅವಕಾಶ ಮಾಡಿಕೊಡಬೇಕು. ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳೆಯರಿಗೆ ಯಾವುದೇ ಗೌರವವಿಲ್ಲ ಎಂದಿದ್ದಾರೆ.
ನಿನ್ನೆ ಗೃಹ ಸಚಿವ ಪರಮೇಶ್ವರ್ ಭೇಟಿಗೆ ನನಗೆ ಅವಕಾಶ ನೀಡಲಿಲ್ಲ. ನಿನ್ನೆ ಪರಮೇಶ್ವರ್ ಮನೆಯ ಬಳಿ ಹೋದಾಗ, ನಿನ್ನಂಥವರನ್ನು ನಾವು ತುಂಬಾ ಜನರನ್ನು ನೋಡಿದ್ದೇವೆ ಅಂತ ಅಂದಿದ್ದರು. ನಾನು ಹೋರಾಟವನ್ನು ಮುಂದುವರಿಸುತ್ತೇನೆ, ಯಾವುದೇ ಬೆದರಿಕೆಗೂ ಹೆದರೋಲ್ಲ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.