
ಚೆನ್ನೈ (ಡಿ.28): ಸೂಪರ್'ಸ್ಟಾರ್ ರಜನೀಕಾಂತ್ ರಾಜಕೀಯಕ್ಕೆ ಸೇರುವ ಬಗ್ಗೆ 6 ದಿನಗಳ ಕಾಲ ಅಭಿಮಾನಿಗಳ ಜೊತೆ ಸಂವಾದ ನಡೆಸುತ್ತಿದ್ದಾರೆ. ಇಂದು ನಡೆದ ಸಂವಾದದಲ್ಲಿ ವರನಟ ಡಾ.ರಾಜ್'ಕುಮಾರ್'ರನ್ನು ರಜನಿಕಾಂತ್ ಹಾಡಿ ಹೊಗಳಿದ್ದಾರೆ. ಡಾ.ರಾಜ್ ನನ್ನ ಪಾಲಿನ ಆದರ್ಶ. ರಾಜ್'ಕುಮಾರ್ ಓರ್ವ ಅದ್ಭುತ ನಟ ಎಂದು ತಲೈವಾ ಶ್ಲಾಘಿಸಿದ್ದಾರೆ.
ಶಿವಾಜಿ ಗಣೇಶನ್, ಎಂಜಿಆರ್'ರಂತೆ ರಾಜ್ಕುಮಾರ್ ಕೂಡಾ ಮಹಾನ್ ನಟ. ಅಣ್ಣಾವ್ರ ಕಾಲಿಗೆ ಬಿದ್ದು ನಮಸ್ಕರಿಸಿದ್ದು ನನ್ನ ಪುಣ್ಯ. ಕಾದು ಕಾದು ನಂತರ ಅವರು ಸಿಕ್ಕಾಗ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ನಾನು ಬೆಂಗಳೂರಿನಲ್ಲಿ ಇದ್ದಾಗ ರಾಜ್ಕುಮಾರ್ ಸಿನಿಮಾ ಇಷ್ಟಪಡುತ್ತಿದ್ದೆ ಎಂದು ಅಣ್ಣಾವ್ರನ್ನ ರಜನೀಕಾಂತ್ ಹಾಡಿ ಹೊಗಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.