ರಾಮಾಯಣದ ಸ್ಥಳಗಳಿಗೆ ರೈಲ್ವೆಯಿಂದ ಪ್ಯಾಕೇಜ್ ಟೂರ್

Published : Aug 25, 2018, 11:36 AM ISTUpdated : Sep 09, 2018, 08:39 PM IST
ರಾಮಾಯಣದ ಸ್ಥಳಗಳಿಗೆ ರೈಲ್ವೆಯಿಂದ ಪ್ಯಾಕೇಜ್ ಟೂರ್

ಸಾರಾಂಶ

ಶ್ರೀರಾಮನಿಗೆ ಸಂಬಂಧಿಸಿದ ಸ್ಥಳಗಳಿಗೆ ತೆರಬೇಕೆಂದುಕೊಂಡಿರುವವರಿಗೆ ರೈಲ್ವೆ ಇಲಾಖೆ ಶುಔ ಸುದ್ದಿಯೊಂದನ್ನು ನೀಡಿದೆ.  ಪ್ರವಾಸಿಗರನ್ನು ಕರೆದೊಯ್ಯಲು ರೈಲ್ವೆ ಇಲಾಖೆ ‘ಶ್ರೀರಾಮಾಯಣ ಯಾತ್ರಾ  ಎಕ್ಸ್‌ಪ್ರೆಸ್’ ಎಂಬ ಪ್ರವಾಸಿ ರೈಲನ್ನು ನವೆಂಬರ್ 14 ರಿಂದ ಆರಂಭಿಸು ವುದಾಗಿ ಪ್ರಕಟಿಸಿದೆ. 

ನವದೆಹಲಿ: ಶ್ರೀರಾಮನಿಗೆ ಸಂಬಂಧಿಸಿದ ಸ್ಥಳಗಳಿಗೆ ಪ್ರವಾಸಿಗರನ್ನು ಕರೆದೊಯ್ಯಲು ರೈಲ್ವೆ ಇಲಾಖೆ ‘ಶ್ರೀರಾಮಾಯಣ ಯಾತ್ರಾ  ಎಕ್ಸ್‌ಪ್ರೆಸ್’ ಎಂಬ ಪ್ರವಾಸಿ ರೈಲನ್ನು ನ. 14 ರಿಂದ ಆರಂಭಿಸು ವುದಾಗಿ ಪ್ರಕಟಿಸಿದೆ. ಈ ರೈಲು ಬಳ್ಳಾರಿ ಜಿಲ್ಲೆಯ ಹೊಸ ಪೇಟೆಗೂ ಆಗಮಿಸುತ್ತದೆ. ‘ಶ್ರೀರಾಮಾಯಣ ಯಾತ್ರಾ ಎಕ್ಸ್‌ಪ್ರೆಸ್’ ಮೂಲಕ 15 ದಿನಗಳ ಪ್ಯಾಕೇಜ್ ಪ್ರವಾಸವನ್ನು ರೈಲ್ವೆ ಇಲಾಖೆ ರೂಪಿಸಿದೆ. 

ಊಟ, ವಸತಿ, ಸಾರಿಗೆ ವೆಚ್ಚ ಎಲ್ಲವನ್ನೂ ಈ ಪ್ಯಾಕೇಜ್ ಒಳಗೊಂಡಿರುತ್ತದೆ. ತಮಿಳುನಾಡಿನ ಮದುರೈ, ದಿಂಡಿಗಲ್, ಕರೂರು, ಈರೋಡ್, ಸೇಲಂ, ಜೋಲಾರ್‌ಪೇಟೆ, ಕಾಟ್ಪಾಡಿ, ಚೆನ್ನೈ ಸೆಂಟ್ರಲ್, ರೇಣಿಗುಂಟ ದಲ್ಲಿ ಪ್ರವಾಸಿಗರು ಈ ರೈಲನ್ನು ಏರ ಬಹುದು. ಈ ರೈಲು ನಿಲುಗಡೆ ಆಗುವ ಮೊದಲ ಪ್ರವಾಸಿ ತಾಣ ಹಂಪಿ. ಅಲ್ಲಿಂದ ಕಿಷ್ಕಿಂಧೆಗೆ ಯಾತ್ರಿಗಳನ್ನು ಕರೆದೊಯ್ಯಲಾಗುತ್ತದೆ. 

ನಂತರ ಮಹಾರಾಷ್ಟ್ರ, ಬಿಹಾರ, ನೇಪಾಳ, ಅಲಹಾ ಬಾದ್, ರಾಮೇಶ್ವರ್ ಸೇರಿದಂತೆ ವಿವಿಧ ಭಾಗಗಳಿಗೆ ತೆರಳಲಿದೆ.800 ಮಂದಿ ಈ ರೈಲಿನಲ್ಲಿ ತೆರಳಬಹುದಾಗಿದೆ. ಮದುರೈ ನಿಂದ ಆರಂಭವಾಗುವ ಈ ರೈಲು ಯಾತ್ರೆ ರಾಮೇಶ್ವರಂನಲ್ಲಿ ಅಂತ್ಯಗೊಳ್ಳಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚುನಾವಣೆ ಆಯೋಗದ 6 ಲೋಪ ಬಳಸಿ ಆಳಂದ ಕ್ಷೇತ್ರದಲ್ಲಿ ಮತಗಳ್ಳತನ: ಎಸ್‌ಐಟಿ
ಮೋದಿ, ಶಾಗೇ ಹೆದರದೆ ಜೈಲಿಗೆ ಹೋಗಿದ್ದೆ, ಯಾರಿಗೂ ಜಗ್ಗಲ್ಲ: ಡಿ.ಕೆ.ಶಿವಕುಮಾರ್‌ ಎಚ್ಚರಿಕೆ