
ನವದೆಹಲಿ(ಅ.10): ಖಾಸಗಿ ಕಂಪನಿಗಳಲ್ಲಿ ನೌಕರರಿಗೆ ಮಾಸಿಕ ಇಂತಿಷ್ಟು ಗುರಿ ನಿಗದಿಪಡಿಸುವುದು ಮಾಮೂಲಿ. ಆದರೆ ರೈಲುಗಳಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸುವವರನ್ನು ಪತ್ತೆ ಹಚ್ಚಿ ದಂಡ ವಿಧಿಸುವ ಸಿಬ್ಬಂದಿಗೂ ಪಶ್ಚಿಮ ರೈಲ್ವೆ ದಂಡ ವಸೂಲಿ ಗುರಿ ನಿಗದಿಪಡಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಪ್ರತಿ ರೈಲಿನಿಂದ 6ರಿಂದ 8 ಸಾವಿರ ರುಪಾಯಿ ದಂಡವನ್ನು ಪ್ರತಿನಿತ್ಯ ಸಂಗ್ರಹಿಸಬೇಕು ಎಂದು ಪಶ್ಚಿಮ ರೈಲ್ವೆ ಸೂಚಿಸಿದೆ ಎಂದು ಆಪಾದಿಸಿರುವ ಟಿಕೆಟ್ ತಪಾಸಣೆ ಸಿಬ್ಬಂದಿ, ಈ ಗುರಿಯನ್ನು ತಲುಪಲು ವಿಫಲವಾದರೆ ಮೇಲಧಿಕಾರಿಗಳು ನಿಂದಿಸುತ್ತಿದ್ದಾರೆ ಎಂದು ಗೋಳು ತೋಡಿಕೊಂಡಿದ್ದಾರೆ.
ಈ ಗುರಿ ತಲುಪಲು ನಾವು ಹೆಚ್ಚಿಗೆ ಸಮಯ ಕೆಲಸ ಮಾಡಬೇಕಾಗುತ್ತಿದೆ ಎಂದು ಓರ್ವ ಟಿಟಿ ತನ್ನ ಗೋಳು ತೋಡಿಕೊಂಡರೆ, ಮತ್ತೋರ್ವ ಟಿಟಿ ದೂರದ ಸ್ಥಳಗಳಿಗೆ ವರ್ಗಾವಣೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ತಮ್ಮ ಆತಂಕ ತೋಡಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.