
ಬೆಂಗಳೂರು(ಅ.09): ಪ್ರಯಾಣಿಕನೊಬ್ಬ ರೈಲಿನ ಬಗ್ಗೆ ಮಾಹಿತಿ ಕೇಳಿದ್ದಕ್ಕೆ ರೈಲ್ವೆ ಸಿಬ್ಬಂದಿ ಪ್ರಯಾಣಿಕನ ಜೊತೆ ಅನುಚಿತವಾಗಿ ವರ್ತಿಸಿ ಪೆನ್ನಿನಿಂದ ಚುಚ್ಚಿರುವ ಘಟನೆ ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣಲದಲ್ಲಿ ನಡೆದಿದೆ. ಘಟನೆಯಲ್ಲಿ 54 ವರ್ಷದ ನಾರಾಯಣಸ್ವಾಮಿಗೆ ಎಡಗೈಗೆ ಗಾಯಗೊಂಡಿದ್ದು ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಜೀವನ್ ಭೀಮಾನಗರ ನಿವಾಸಿ ನಾರಾಯಣ ಸ್ವಾಮಿ ಎಂಬುವವರು ಮೈಸೂರಿಗೆ ಹೋಗಲು ಬೆಳಗ್ಗೆ ಸಿಟಿ ರೈಲ್ವೇ ಸ್ಟೇಷನ್'ಗೆ ಬಂದಿದ್ದರು. ಟಿಕೇಟ್ ತೆಗೆದುಕೊಂಡು ಬಂದು ಕೌಂಟರ್'ನಲ್ಲಿದ್ದ ರಿಜಿಸ್ಟರೇಷನ್ ಮತ್ತು ಕ್ಯಾನ್ಸಲೇಷನ್ ಕೌಂಟರ್ ಸುಬ್ಬಯ್ಯ ಎಂಬುವವರ ಬಳಿ ಮಾಹಿತಿ ಕೇಳಿದ್ದಾರೆ. ಈ ವೇಳೆ ರೈಲ್ವೇ ವಿಚಾರಣೆ ಕೌಂಟರ್ ನಲ್ಲಿದ್ದ ಸುಬ್ಬಯ್ಯ ಎಂಬಾತ ನಾರಾಯಣ ಸ್ವಾಮಿಯವರಿಗೆ ಪೆನ್ನಿನಿಂದ ಚುಚ್ಚಿದ್ದಾನೆ. ರೈಲ್ವೇ ಸ್ಟೇಷನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.