
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ದೀಪಾವಳಿ ಮುಗಿದ ನಂತರ ಪಕ್ಷದ ಅಧ್ಯಕ್ಷರಾಗಲಿದ್ದಾರೆ ಎಂದು ರಾಹುಲ್ ಆಪ್ತರೂ ಆಗಿರುವ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ಹೇಳಿದ್ದಾರೆ.
ಅಕ್ಟೋಬರ್-ನವೆಂಬರ್ ವೇಳೆ ರಾಹುಲ್ ಪಟ್ಟಾಭಿಷೇಕ ನಡೆಯಬಹುದು ಎಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರು ನೀಡಿದ ಹೇಳಿಕೆಯ ಬೆನ್ನಲ್ಲೇ ಪೈಲಟ್ ಅವರ ಈ ಹೇಳಿಕೆ ಬಂದಿದೆ. ‘ಪಕ್ಷದ ಉಪಾಧ್ಯಕ್ಷರು ಈಗ ಪಕ್ಷವನ್ನು ಮುನ್ನಡೆಸುವ ಕಾಲ ಬಂದಿದೆ’ ಎಂದು ಪೈಲಟ್ ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
‘ಪಕ್ಷದ ಸಂಘಟನಾತ್ಮಕ ಚುನಾವಣೆಗಳು ಈಗ ಪ್ರಗತಿಯಲ್ಲಿವೆ. ಬಳಿಕ ದೀಪಾವಳಿ ನಂತರ (ಅಕ್ಟೋಬರ್ 3ನೇ ವಾರ) ಪಕ್ಷದ ಹೊಸ ಅಧ್ಯಕ್ಷರು ಅಧಿಕಾರ ವಹಿಸಿಕೊಳ್ಳ ಬಹುದು. ಬಹಳ ದಿನದಿಂದ ಇದು ನೆರವೇರುವುದು ಬಾಕಿ ಇದೆ’ ಎಂದು ಅವರು ಹೇಳಿದರು. ಗಾಂಧಿ ಎಂಬ ಅಡ್ಡಹೆಸರು ಪದೋನ್ನತಿಗೆ ಅರ್ಹತೆ ಎನ್ನಿಸಿಕೊಳ್ಳದು. ಸಾಧನೆಯೇ ಈ ಸ್ಥಾನಕ್ಕೇರಲು ಅರ್ಹತೆ ಎಂದು ಅವರು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.