
ಚಂಡೀಗಢ: ಕೇರಳದಲ್ಲಿ 13 ಜನರನ್ನು ಬಲಿ ಪಡೆದಿರುವ ನಿಪಾ ವೈರಸ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಹೋಲಿಸಿರುವ ಹರ್ಯಾಣ ಸಚಿವ ಅನಿಲ್ ವಿಜ್ ಹೊಸ ವಿವಾದ ಸೃಷ್ಟಿಸಿದ್ದಾರೆ.
ಸೋಮವಾರ ಈ ಬಗ್ಗೆ ಟ್ವೀಟ್ ಮಾಡಿರುವ ವಿಜ್ ‘ರಾಹುಲ್ ಗಾಂಧಿ ಅವರು ಬಲಿ ಪಡೆಯುವ ನಿಪಾ ವೈರಸ್ ಇದ್ದಂತೆ. ಅವರು ಯಾವುದೇ ಪಕ್ಷದ ಜತೆ ಸಂಪರ್ಕ ಸಾಧಿಸಿದರೂ, ಆ ಪಕ್ಷ ಸರ್ವನಾಶವಾಗುತ್ತದೆ.
ಎಲ್ಲ ಪಕ್ಷಗಳು ಒಟ್ಟುಗೂಡಲು ಮುಂದಾಗುತ್ತಿದ್ದಾರೆ. ಆದರೆ, ಅವರೆಲ್ಲರ ಕಥೆ ಮುಗಿದಂತೆ,’ ಎಂದು ವ್ಯಂಗ್ಯವಾ ಡಿದ್ದಾರೆ. ಈ ಹಿಂದೆಯೂ ವಿಜ್ ಹಲವು ಬಾರಿ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.