ಮೋದಿ ಸೋಲಿಸಲು ಅನೇಕರ ಬಳಿ ಮಿತ್ರರಾಗಿ ಎನ್ನುತ್ತಿದ್ದಾರೆ ರಾಹುಲ್ ಗಾಂಧಿ!

Published : Jun 12, 2018, 06:32 PM IST
ಮೋದಿ ಸೋಲಿಸಲು ಅನೇಕರ ಬಳಿ ಮಿತ್ರರಾಗಿ ಎನ್ನುತ್ತಿದ್ದಾರೆ ರಾಹುಲ್ ಗಾಂಧಿ!

ಸಾರಾಂಶ

ಕರ್ನಾಟಕದಲ್ಲಿ ಬಿಜೆಪಿಯನ್ನು ಹೊರಗಿಡಲು ದೇವೇಗೌಡರ ಮೊರೆ ಹೋದ ಕಾಂಗ್ರೆಸ್, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ  ಮಾಯಾವತಿ ಜೊತೆ ಮೈತ್ರಿಗೆ ಮುಂದಾಗಿದೆ. ದಲಿತ ಮತಗಳು ಹರಿದು ಹಂಚಬಾರದು ಎಂದು ರಾಹುಲ್ ಗಾಂಧಿ ಅವರು ಗುಲಾಂ ನಬಿ ಆಜಾದ್‌ಗೆ ಮಾಯಾವತಿ ಜೊತೆ ಮಾತನಾಡುವ ಜವಾಬ್ದಾರಿ ವಹಿಸಿದ್ದಾರೆ.

ಬೆಂಗಳೂರು (ಜೂ. 12): ಕರ್ನಾಟಕದಲ್ಲಿ ಬಿಜೆಪಿಯನ್ನು ಹೊರಗಿಡಲು ದೇವೇಗೌಡರ ಮೊರೆ ಹೋದ ಕಾಂಗ್ರೆಸ್, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಮಾಯಾವತಿ ಜೊತೆ ಮೈತ್ರಿಗೆ ಮುಂದಾಗಿದೆ.

ದಲಿತ ಮತಗಳು ಹರಿದು ಹಂಚಬಾರದು ಎಂದು ರಾಹುಲ್ ಗಾಂಧಿ ಅವರು ಗುಲಾಂ ನಬಿ ಆಜಾದ್‌ಗೆ ಮಾಯಾವತಿ ಜೊತೆ ಮಾತನಾಡುವ ಜವಾಬ್ದಾರಿ ವಹಿಸಿದ್ದಾರೆ. ಇನ್ನು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ನಿಂದ ದೂರ ಹೋಗಿರುವ ಅಜಿತ್ ಜೋಗಿಯವರ ಪತ್ನಿಗೆ ಅಮೆರಿಕದಿಂದ ಫೋನಾಯಿಸಿದ್ದ ರಾಹುಲ್, ಅಜಿತ್ ಜೋಗಿಯವರ ಆರೋಗ್ಯ ವಿಚಾರಿಸಿದ್ದರು.

ಅವರನ್ನು ಮತ್ತೆ ವಾಪಸ್ ಕರೆದುಕೊಳ್ಳುವ ಇರಾದೆ ರಾಹುಲ್‌ಗೆ ಇದ್ದಂತಿದೆ. ನೇರವಾಗಿ ಮೋದಿಯನ್ನು ಸೋಲಿಸೋದು ಕಷ್ಟ ಎಂದು ಅರಿತಿರುವ ರಾಹುಲ್ ಈಗ ಅನೇಕರ ಬಳಿ ಮಿತ್ರರಾಗಿ ಪ್ಲೀಸ್ ಮಿತ್ರರಾಗಿ ಎನ್ನುತ್ತಿದ್ದಾರೆ.  

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
ಅನುದಾನ ಬೇಕಾದ್ರೆ ನಾಟಿ ಕೋಳಿ ಅಡುಗೆ ಮಾಡಬೇಕಾ? ರಾಜ್ಯ ಸರ್ಕಾರಕ್ಕೆ ಸಿ.ಟಿ.ರವಿ ಪ್ರಶ್ನೆ