ಸರ್ಕಾರ ಕಾಳಧನದ ವಿರುದ್ಧ ಅಲ್ಲ, ಬಡವರ ಹಾಗೂ ರೈತರ ವಿರುದ್ಧವಾಗಿದೆ: ರಾಹುಲ್ ಗಾಂಧಿ

Published : Dec 19, 2016, 11:54 AM ISTUpdated : Apr 11, 2018, 01:11 PM IST
ಸರ್ಕಾರ ಕಾಳಧನದ ವಿರುದ್ಧ ಅಲ್ಲ, ಬಡವರ ಹಾಗೂ ರೈತರ ವಿರುದ್ಧವಾಗಿದೆ: ರಾಹುಲ್ ಗಾಂಧಿ

ಸಾರಾಂಶ

ನ.8 ರಂದು ಸರ್ಕಾರ ಕೈಗೊಂಡಿರುವ ನಿರ್ಧಾರವು ಕಾಳಧನದ ವಿರುದ್ಧವಾಗಿರದೇ, ಬಡವರ ಹಾಗೂ ರೈತರ ವಿರುದ್ಧವಾಗಿದೆ, ಎಂದು ಜನಾಕ್ರೋಶ ರ್ಯಾಲಿಯನ್ನುದ್ದೇಶಿ ಮಾತನಾಡಿದ ರಾಹುಲ್ ಗಾಂಧಿ ಹೇಳಿದ್ದಾರೆ.

ಜುನಾಪುರ, ಉತ್ತರ ಪ್ರದೇಶ (ಡಿ.19): ನೋಟು ಅಮಾನ್ಯ ಕ್ರಮದ ವಿರುದ್ಧ ವಾಗ್ದಾಳಿಯನ್ನು ಮುಂದುವರೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ  ಕ್ರಮವು ಕಾಳಧನದ ವಿರುದ್ಧವಾಗಿರದೇ, ದೇಶದ ಬಡಜನ ಹಾಗೂ ರೈತರ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ನ.8 ರಂದು ಸರ್ಕಾರ ಕೈಗೊಂಡಿರುವ ನಿರ್ಧಾರವು ಕಾಳಧನದ ವಿರುದ್ಧವಾಗಿರದೇ, ಬಡವರ ಹಾಗೂ ರೈತರ ವಿರುದ್ಧವಾಗಿದೆ, ಎಂದು ಜನಾಕ್ರೋಶ ರ್ಯಾಲಿಯನ್ನುದ್ದೇಶಿ ಮಾತನಾಡಿದ ರಾಹುಲ್ ಗಾಂಧಿ ಹೇಳಿದ್ದಾರೆ.

ನೋಟು ಅಮಾನ್ಯ ಕ್ರಮವು ಸರ್ಜಿಕಲ್ ದಾಳಿಯಲ್ಲ, ಬದಲಾಗಿ ಜನಸಾಮಾನ್ಯರ ಮೇಲೆ ನಡೆಸಿರುವ ಬಾಂಬ್ ದಾಳಿಯಗಿದೆ ಎಂದು ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.

ರೈತರ ಸಾಲ ಮನ್ನಾ ಮಾಡಿ ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದೆವು, ಆದರೆ ಪ್ರಧಾನಿ ಆ ಬಗ್ಗೆ ಯಾವುದೇ ಸಕಾರಾತ್ಮಕ ಉತ್ತರವನ್ನು ನೀಡಿಲ್ಲವೆಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಡಿಸಿದ್ದಾರೆ.

ಪ್ರಧಾನಿ ವಿರುದ್ಧ ಧಿಕ್ಕಾರ ಕೂಗುವುದನ್ನು ಆಕ್ಷೇಪಿಸಿದ ರಾಹುಲ್ ಗಾಂಧಿ, ಮೋದಿ ವಿರುದ್ಧ ನಮ್ಮ ಹೋರಾಟ ರಾಜಕೀಯವಾದುದ್ದು, ಆದುದರಿಂದ ಅವರಿಗೆ ಧಿಕ್ಕಾರ ಕೂಗಬೇಡಿ; ಅಂಥ ಭಾಷೆಯನ್ನು ಆರೆಸ್ಸೆಸ್ ಬಳಸುತ್ತದೆ, ಕಾಂಗ್ರೆಸ್ ಅಲ್ಲ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈ ಹೌಸಿಂಗ್ ಕಾಂಪ್ಲೆಕ್ಸ್‌ನಲ್ಲಿ ಅಗ್ನಿ ದುರಂತ, ನಿರ್ದೇಶಕ ಸಂದೀಪ್ ಸಿಂಗ್ ಸೇರಿ 40 ಮಂದಿ ರಕ್ಷಣೆ
ಹೊಸ ವರ್ಷಕ್ಕೆ ಎಲೆಕ್ಟ್ರಾನಿಕ್ ಸಿಟಿ ಹೈ ಅಲರ್ಟ್; ಮಹಿಳೆಯರ ಸುರಕ್ಷತೆಗೆ 'ರಾಣಿ ಚೆನ್ನಮ್ಮ ಪಡೆ ಸಜ್ಜು, ಪಬ್-ಬಾರ್‌ಗಳಿಗೆ ಪೊಲೀಸರ ಬಿಗಿ ರೂಲ್ಸ್!