
ಚೆನ್ನೈ (ಡಿ.19): ತಮಿಳುನಾಡಿನ ಮಸೀದಿಗಳಲ್ಲಿ ನಡೆಯುವ ಅನಧಿಕೃತ ಶರೀಯಾ ಕೋರ್ಟ್’ಗಳು ಇನ್ಮುಂದೆ ಕಾರ್ಯಾಚರಿಸುವಂತಿಲ್ಲವೆಂದು ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ.
ಧಾರ್ಮಿಕ ಸ್ಥಳಗಳು ಧಾರ್ಮಿಕ ಚಟುವಟಿಗೆಗಳಿಗೆ ಸೀಮಿತವಾಗಿರಬೇಕೆಂದು ಹೇಳಿರುವ ಹೈಕೋರ್ಟ್, 2 ವಾರಗಳೊಳಗೆ ಆದೇಶವನ್ನು ಜಾರಿಗೊಳಿಸಿ ವರದಿ ನೀಡುವಂತೆ ತಮಿಳುನಾಡು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಅನಿವಾಸಿ ಭಾರತೀಯ ಅಬ್ದುಲ್ ರೆಹಮಾನ್ ಎಂಬವರು, ಚೆನ್ನೈ’ನಲ್ಲಿ ಮಕ್ಕಾ ಮಸಿದಿಯಲ್ಲಿರುವ ಶರಿಯತ್ ಕೌನ್ಸಿಲ್ ಒಂದು ನ್ಯಾಯಾಲಯದ ರೀತಿಯಲ್ಲೇ ಕಾರ್ಯಾಚರಿಸುತ್ತಿದೆ, ಹಾಗೂ ತಾನು ಶರೀಯತ್ ಪ್ರಕಾರ ನ್ಯಾಯಾದಾನ ಮಾಡುವುದಾಗಿ ಮುಸ್ಲಿಮರನ್ನು ನಂಬಿಸಿ, ಆದೇಶಗಳನ್ನು ಹೊರಡಿಸುತ್ತಿದೆ ಎಂದು ದೂರಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.
ತಾನು ಕೂಡಾ ಆ ಶರೀಯತ್ ಕೋರ್ಟ್’ನ ಸಂತ್ರಸ್ತನೆಂದು ಅರ್ಜಿದಾರ ಹೇಳಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.