ನನ್ನ ಅಜ್ಜಿಗೆ ಮಾಡಿದ ಉಪಕಾರ ಮರೆಯಲ್ಲ: ರಾಹುಲ್ ಗಾಂಧಿ

Published : Mar 22, 2018, 08:40 AM ISTUpdated : Apr 11, 2018, 12:57 PM IST
ನನ್ನ ಅಜ್ಜಿಗೆ ಮಾಡಿದ  ಉಪಕಾರ ಮರೆಯಲ್ಲ: ರಾಹುಲ್ ಗಾಂಧಿ

ಸಾರಾಂಶ

ನಾಲ್ಕು ದಶಕದ ಹಿಂದೆ ಇದೇ ಮೈದಾನದಲ್ಲಿ ನಿಂತು ನನ್ನ ಅಜ್ಜಿ ನಿಮ್ಮ ನೆರವು ಕೋರಿದ್ದರು. ಅಜ್ಜಿಯ ಅತ್ಯಂತ ಸಂಕಷ್ಟದ ಸಂದರ್ಭದಲ್ಲಿ ನೀವು ಅವರಿಗೆ ನೆರವಾದಿರಿ, ಶಕ್ತಿ ನೀಡಿದಿರಿ. ಇದನ್ನು ಜೀವವಿರುವವರೆಗೂ ನಾನು ಮರೆಯೋದಿಲ್ಲ.  1978ರಲ್ಲಿ ಚಿಕ್ಕಮಗಳೂರು ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಪುನರ್ಜನ್ಮ ಪಡೆದ ಇಂದಿರಾ ಗಾಂಧಿ ಹಾಗೂ ಚಿಕ್ಕಮಗಳೂರು ಜನತೆಯ ಸಂಬಂಧವನ್ನು ನೆನೆದು ಭಾವುಕರಾದ ರಾಹುಲ್‌ ಗಾಂಧಿ ಹೇಳಿದ ನುಡಿಗಳಿವು.

ಚಿಕ್ಕಮಗಳೂರು (ಮಾ. 22): ನಾಲ್ಕು ದಶಕದ ಹಿಂದೆ ಇದೇ ಮೈದಾನದಲ್ಲಿ ನಿಂತು ನನ್ನ ಅಜ್ಜಿ ನಿಮ್ಮ ನೆರವು ಕೋರಿದ್ದರು. ಅಜ್ಜಿಯ ಅತ್ಯಂತ ಸಂಕಷ್ಟದ ಸಂದರ್ಭದಲ್ಲಿ ನೀವು ಅವರಿಗೆ ನೆರವಾದಿರಿ, ಶಕ್ತಿ ನೀಡಿದಿರಿ. ಇದನ್ನು ಜೀವವಿರುವವರೆಗೂ ನಾನು ಮರೆಯೋದಿಲ್ಲ.  1978ರಲ್ಲಿ ಚಿಕ್ಕಮಗಳೂರು ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಪುನರ್ಜನ್ಮ ಪಡೆದ ಇಂದಿರಾ ಗಾಂಧಿ ಹಾಗೂ ಚಿಕ್ಕಮಗಳೂರು ಜನತೆಯ ಸಂಬಂಧವನ್ನು ನೆನೆದು ಭಾವುಕರಾದ ರಾಹುಲ್‌ ಗಾಂಧಿ ಹೇಳಿದ ನುಡಿಗಳಿವು.

ಚಿಕ್ಕಮಗಳೂರು ಜಿಲ್ಲಾ ಆಟದ ಮೈದಾನದಲ್ಲಿ ಬುಧವಾರ ಕಾಂಗ್ರೆಸ್‌ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ನನ್ನ ಅಗತ್ಯ ನಿಮಗೆ ಬಂದಾಗ ಕೇವಲ ಒಂದು ಸಂಜ್ಞೆಯನ್ನು ಮಾಡಿ ಸಾಕು ನಾನು ನಿಮ್ಮ ಮುಂದೆ ಹಾಜರಾಗುತ್ತೇನೆ. ಈ ಕ್ಷೇತ್ರದೊಂದಿಗೆ ನನ್ನ ಕುಟುಂಬದ ಸಂಬಂಧ ಅತ್ಯಂತ ಪುರಾತನವಾದದ್ದು. ನನ್ನ ಅಜ್ಜಿಗೆ ನೀವು ಶಕ್ತಿ ನೀಡಿದಿರಿ. ಆ ಶಕ್ತಿಯನ್ನು ಬಳಸಿಕೊಂಡು ಇಂದಿರಾ ಅವರು ಬಡವರು, ಶೋಷಿತರು ಹಾಗೂ ರೈತರ ಕಲ್ಯಾಣಕ್ಕಾಗಿ ದುಡಿದರು. ನನ್ನ ಆಲೋಚನೆಯೂ ಸಹಾ ನನ್ನ ಅಜ್ಜಿಯ ಆಲೋಚನೆಯಂತೆಯೇ ಇದೆ. ನನಗೆ ನೀವು ಶಕ್ತಿ ತುಂಬಿದರೆ, ಅಜ್ಜಿಯಂತೆಯೇ ಶೋಷಿತರು, ಬಡವರ ಕಲ್ಯಾಣಕ್ಕಾಗಿ ಆ ಶಕ್ತಿಯನ್ನು ಧಾರೆಯೆರೆಯುವೆ. ಬಿಜೆಪಿ ಈ ದೇಶವನ್ನು ವಿಭಜಿಸಲು ಯತ್ನಿಸುತ್ತಿದೆ. ನೀವು ನೀಡುವ ಶಕ್ತಿಯನ್ನು ನಾನು ದೇಶವನ್ನು ಜೋಡಿಸಲು ಬಳಸುವೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು
ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ