
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಎಂ ಬಿ ಪಾಟೀಲ್ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ‘ಪಾಟೀಲ್ ಈಸ್ ಜಂಟಲ್ಮ್ಯಾನ್’ ಎಂದು ಸೋನಿಯಾ ಹೊಗಳುತ್ತಿರುತ್ತಾರೆ. ಆದರೆ ರಾಹುಲ್ ಗಾಂಧಿ ಅವರಿಗೆ ಪಾಟೀಲರು ಟೆನ್ಷನ್ ಪಾರ್ಟಿ ಎಂಬ ಅಭಿಪ್ರಾಯವಿದೆ.
ವಿಪರೀತ ಟೆನ್ಷನ್ ಮಾಡಿಕೊಂಡು ಬಿಪಿ ಏರಿಸಿಕೊಂಡು ಓಡಾಡುವ ಬಗ್ಗೆ ಪಾಟೀಲರಿಗೆ, ‘ಹೀಗೆ ಮಾಡಬೇಡಿ’ ಎಂದು ಕೂಡ ಹೇಳಿಸಿದ್ದಾರಂತೆ. ಮೊನ್ನೆ ದಿಲ್ಲಿಗೆ ಬಂದಿದ್ದಾಗ ಕೂಡ ನಿದ್ದೆಗೆಟ್ಟು ಕಣ್ಣು ಉಬ್ಬಿಸಿಕೊಂಡು ಬಂದಿದ್ದ ಪಾಟೀಲರನ್ನು ನೋಡಿ ರಾಹುಲ್ ಗಾಂಧಿ, ‘ಥೋಡಾ ರಾತ್ ಕೋ ಸೋಯಿಯೇ, ಆಂಖೇ ದೇಖೋ ಆಪ್ ಕಿ’ ಎಂದರಂತೆ. ರಾಹುಲ್ ಮಾತಿನಿಂದ ಇನ್ನಷ್ಟು ಕಣ್ಣೀರಾದ ಎಂ ಬಿ ಪಾಟೀಲ್ ‘ಏನಿಲ್ಲಾ ಸರ್.. ನನಗೆ ಅಧಿಕಾರ ಬೇಡ. ಆದರೆ ಬಿಜೆಪಿ ಜೊತೆ ಸಂಪರ್ಕದಲ್ಲಿರುವ ಶಿವಾನಂದ ಪಾಟೀಲರಿಗೆ ಅಧಿಕಾರ ಕೊಟ್ಟಿದ್ದು ಬಹಳ ಬೇಸರ ತಂದಿದೆ’ ಎಂದು ಮನದ ನೋವನ್ನು ಹೇಳಿಕೊಂಡೇಬಿಟ್ಟರಂತೆ.
-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.