ಐರೋಪ್ಯ ಸಂಸದರದ್ದು ನಿಯೋಗವೋ, ಪ್ರವಾಸವೋ?: ಆಯೋಜಕರ ಕಚೇರಿ ಬಂದ್!

Published : Oct 30, 2019, 05:57 PM IST
ಐರೋಪ್ಯ ಸಂಸದರದ್ದು ನಿಯೋಗವೋ, ಪ್ರವಾಸವೋ?: ಆಯೋಜಕರ ಕಚೇರಿ ಬಂದ್!

ಸಾರಾಂಶ

ಐರೋಪ್ಯ ಸಂಸದರದ್ದು ನಿಯೋಗವೋ, ಪ್ರವಾಸವೋ?| ಸಂಸದರ ನಿಯೋಗದ ಪ್ರವಾಸ ಆಯೋಜಿಸಿದ್ದ ಸಂಸ್ಥೆಯ ಕಚೇರಿಗೆ ಬೀಗ| ಭಾರತ ಸರ್ಕಾರದಿಂದ ಆಯೋಜಿತವಾದ ಅಧಿಕೃತ ಭೇಟಿ ಅಲ್ಲವೇ?| ಇಂಟರ್'ನ್ಯಾಶನಲ್ ಇನ್ಸಿಟ್ಯೂಟ್ ಫಾರ್ ಅಲೈಡ್ ಸ್ಟಡೀಸ್ ಸಂಸ್ಥೆಯ ದೆಹಲಿ ಕಚೇರಿಗೆ ಬೀಗ| 20 ಸಂಸದರಿಗೆ ಭಾರತ ಪ್ರವಾಸಕ್ಕೆ ಆಹ್ವಾನ ನೀಡಿದ್ದ ಮಾದಿ ಶರ್ಮಾ ಯಾರು?| 20 ಸಂಸದರು ಬಂದಿದ್ದು ಪ್ರವಾಸಕ್ಕೋ ಅಥವಾ ಕಣಿವೆ ಪರಿಸ್ಥಿತಿಯ ಅವಲೋಕನಕ್ಕೋ?|

ನವದೆಹಲಿ(ಅ.30): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಭಾರತದ ಕ್ರಮ ಹಾಗೂ ಕಣಿವೆಯ ಪರಿಸ್ಥಿತಿ ಅವಲೋಕನಕ್ಕಾಗಿ ಬಂದಿರುವ ಐರೋಪ್ಯ ಒಕ್ಕೂಟದ ಸಂಸದರ ನಿಯೋಗದ ಅಧಿಕೃತತೆ ಕುರಿತು ಪ್ರಶ್ನೆ ಎದ್ದಿದೆ.

ಐರೋಪ್ಯ ಒಕ್ಕೂಟದ ಸಂಸದರಿಗೆ ದೆಹಲಿ ಮೂಲದ ಖಾಸಗಿ ಸಂಸ್ಥೆಯೊಂದು ಪ್ರವಾಸ ಅಧ್ಯಯನಕ್ಕೆ ಆಹ್ವಾನ ನೀಡಿದ್ದು, ಇದು ಭಾರತ ಸರ್ಕಾರದಿಂದ ಆಯೋಜಿತವಾದ ಅಧಿಕೃತ ಭೇಟಿ ಅಲ್ಲ ಎಂಬುದು ಸ್ಪಷ್ಟವಾಗಿದೆ.
ಕಣಿವೆ ನೋಡುವುದೇ ಸುಯೋಗ: ಕಣಿವೆಗೆ ಭೇಟಿ ನೀಡಿದ ಯೂರೋಪಿಯನ್ ನಿಯೋಗ!

ಅಲ್ಲದೇ ಐರೋಪ್ಯ ಒಕ್ಕೂಟದ 20 ಸಂಸದರಿಗೆ ಭಾರತಕ್ಕೆ ಅಧ್ಯಯನ ಪ್ರವಾಸಕ್ಕೆ ಆಹ್ವಾನ ನೀಡಿದ್ದ ಇಂಟರ್'ನ್ಯಾಶನಲ್ ಇನ್ಸಿಟ್ಯೂಟ್ ಫಾರ್ ಅಲೈಡ್ ಸ್ಟಡೀಸ್ ಸಂಸ್ಥೆಯ ದೆಹಲಿ ಕಚೇರಿಗೆ ಬೀಗ ಹಾಕಲಾಗಿದೆ.

ಇಂಟರ್'ನ್ಯಾಶನಲ್ ಇನ್ಸಿಟ್ಯೂಟ್ ಫಾರ್ ಅಲೈಡ್ ಸ್ಟಡೀಸ್ ಸಂಸ್ಥೆಯ ಪರವಾಗಿ ಮಾದಿ ಶರ್ಮಾ ಎಂಬ ಮಹಿಳೆ 20 ಐರೋಪ್ಯ ಒಕ್ಕೂಟದ ಸಂಸದರಿಗೆ ಇ-ಮೇಲ್ ಮೂಲಕ ಭಾರತ ಪ್ರವಾಸದ ಆಹ್ವಾನ ನೀಡಿದ್ದರು.

ಇ-ಮೇಲ್‌ನಲ್ಲಿ ಎರಡು ದಿನಗಳ ಭಾರತ ಪ್ರವಾಸ, ಪ್ರಧಾನಿ ಮೋದಿ ಭೇಟಿ ಹಾಗೂ ಜಮ್ಮು ಮತ್ತು ಕಾಶ್ಮೀರದ ಪ್ರವಾಸದ ಉಲ್ಲೇಖವಿದೆಯೇ ಹೊರತು ಆರ್ಟಿಕಲ್ 370 ರದ್ದತಿ ಬಳಿಕ ಕಣಿವೆ ಪರಿಸ್ಥಿತಿಯ ಅವಲೋಕನ ಕುರಿತು ಉಲ್ಲೇಖವೇ ಇಲ್ಲ.

'ನಾಜಿ ಲವರ್ಸ್'ಗಳಿಂದ ಕಣಿವೆ ಭೇಟಿ: ಮೋದಿ ವಿರುದ್ಧ ಒವೈಸಿ ಕಿಡಿ!

ಇಷ್ಟೇ ಅಲ್ಲದೇ ಈ ಹಿಂದೆ ಕಾಶ್ಮೀರ ವಿಚಾರವಾಗಿ ಮೋದಿ ಸರ್ಕಾರದ ನಿಲುವನ್ನು ಟೀಕಿಸಿದ್ದ ಲಿಬರಲ್ ಡೆಮೊಕ್ರ್ಯಾಟ್ ಪಕ್ಷದ ಸಂಸದ ಕ್ರಿಸ್ ಡೆವಿಸ್ ಅವರನ್ನು ನಿಯೋಗದಿಂದ ಕೈಬಿಟ್ಟಿರುವುದು ಕೂಡ ಅನುಮಾನಕ್ಕೆ ಕಾರಣವಾಗಿದೆ. ಡೆವಿಸ್ ತಮ್ಮ ಹಾಗೂ ಮಾದಿ ಶರ್ಮಾ ನಡುವೆ ನಡೆದ ಇ-ಮೇಲ್ ಸಂಭಾಷಣೆಯನ್ನು ಇದೀಗ ಬಹಿರಂಗಗೊಳಿಸಿದ್ದಾರೆ.

ಐರೋಪ್ಯ ಒಕ್ಕೂಟದ ನಿಯೋಗ ಭಾರತಕ್ಕೆ ಬಂದು ಪ್ರಧಾನಿ ಮೋದಿ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರನ್ನು ಭೇಟಿ ಮಾಡಿತ್ತು. ಈ ವೇಳೆ ಮಾದಿ ಶರ್ಮಾ ಕೂಡ ಉಪಸ್ಥಿತರಿದ್ದರು.

ಭಾರತಕ್ಕೆ ಫುಲ್ ಸಪೋರ್ಟ್: ಐರೋಪ್ಯ ಒಕ್ಕೂಟ ನಿಯೋಗದ ಘೋಷಣೆ!

ಆದರೆ ಸದ್ಯ ಇಂಟರ್'ನ್ಯಾಶನಲ್ ಇನ್ಸಿಟ್ಯೂಟ್ ಫಾರ್ ಅಲೈಡ್ ಸ್ಟಡೀಸ್ ಸಂಸ್ಥೆಯ ದೆಹಲಿ ಕಚೇರಿಗೆ ಬೀಗ ಹಾಕಲಾಗಿದ್ದು, ಸಂಸ್ಥೆಗೆ ಸೇರಿದ ಯಾರೋಬ್ಬರೂ ಸಂಪರ್ಕಕ್ಕೆ ಸಿಗುತ್ತಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!
Video: ಚಲಿಸುವ BMTC ಬಸ್ಸಲ್ಲಿ ಸ್ಟೇರಿಂಗ್ ಹಿಡಿದು ಡ್ರೈವರ್‌ಗಳ ಕಿತ್ತಾಟ; ಪ್ರಯಾಣಿಕರಿಗೆ ಪ್ರಾಣ ಸಂಕಟ!