
ಶಿವಮೊಗ್ಗ(ಜೂನ್.6): ಮಳೆಗಾಲದಲ್ಲಿ ಸಿಗೋ ಮೀನು ಬಹಳ ರುಚಿಕರ. ಇದಕ್ಕಾಗಿ ಹಳ್ಳಿಗಳಲ್ಲಿ ಮೀನಿಗಾಗಿ ಬಲೆ ಬೀಸೋದು ಸಾಮಾನ್ಯ. ಇದೇ ರೀತಿ ಮೀನಿನ ಆಸೆಯಿಂದ ಶಿವಮೊಗ್ಗದ ಆಲ್ಕೊಳದಲ್ಲಿ ಮೀನಿಗಾಗಿ ವ್ಯಕ್ತಿಯೊಬ್ಬರು ಬಲೆ ಹಾಕಿದ್ದರು. ಆದರೆ ಬಲೆಯಲ್ಲಿ ಸಿಕ್ಕಿದ್ದು ಮೀನಲ್ಲ 6 ಅಡಿ ಗಾತ್ರದ ಹೆಬ್ಬಾವು.
ಕೆರೆಯಲ್ಲಿ ಮೀನಿಗಾಗಿ ಅಲ್ಕೊಳ ಗ್ರಾಮದ ರೈತ ಬಲೆ ಬೀಸಿದ್ದರು. ಮರುದಿನ ಬೆಳಗ್ಗೆ ಬಲೆಯಲ್ಲಿ ಸಿಕ್ಕಿರೋ ಮೀನುಗಳನ್ನ ತೆಗೆಯಲು ಕೆರೆಗೆ ಇಳಿದಾಗ ಅಚ್ಚರಿ ಕಾದಿತ್ತು. ಮೀನಿನ ಬದಲು 6 ಅಡಿ ಗಾತ್ರದ ಹೆಬ್ಬಾವು ಸಿಕ್ಕಿಹಾಕಿಕೊಂಡಿತ್ತು.
ತಕ್ಷಣವೇ ಉರಗ ತಜ್ಞ ಸ್ನೇಕ್ ಕಿರಣ್ ಗೆ ಮಾಹಿತಿ ನೀಡಿದ್ದಾರೆ. ಕೆರೆಯ ಬಳಿ ಬಂದ ಸ್ನೇಕ್ ಕಿರಣ್ ಹೆಬ್ಬಾವನ್ನ ಬಲೆಯಿಂದ ಹೊರಗೆ ತೆಗೆದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.