ತನ್ನ ಪುಟ್ಟ ಅಭಿಮಾನಿಯ ಕಿಡ್ನಿ ಕಸಿಗೆ ನೆರವಾದ ಪುನಿತ್ ರಾಜಕುಮಾರ್!

Published : May 26, 2017, 11:32 AM ISTUpdated : Apr 11, 2018, 01:07 PM IST
ತನ್ನ ಪುಟ್ಟ ಅಭಿಮಾನಿಯ ಕಿಡ್ನಿ ಕಸಿಗೆ ನೆರವಾದ ಪುನಿತ್ ರಾಜಕುಮಾರ್!

ಸಾರಾಂಶ

ಪವರ್ ಸ್ಟಾರ್ ಪುನೀತ್ ಎಲ್ಲರಿಗೂ ಅಚ್ಚುಮೆಚ್ಚು. ಮಕ್ಕಳಿಗೂ ಅಪ್ಪು ಅಂದರೆ ಪಂಚಪ್ರಾಣ. ಅದರಂತೆ ಕಳೆದ ಕಲವು ತಿಂಗಳ ಹಿಂದೆ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದ ಪ್ರೀತಿ ಹೆಸರಿನ ಪುಟ್ಟ ಅಭಿಮಾನಿ ಪುನಿತ್ ನೋಡುವ ಆಸೆ ಪಟ್ಟಿದ್ದಳು. ಅದನ್ನು ಸಾಧ್ಯವಾಗಿಸಿದ್ದ ಪುನೀತ್ ಪ್ರೀತಿಗೆ ಮಾತು ಕೊಟ್ಟಂತೆ ಸಹಾಯ ಹಸ್ತ ಚಾಚಿದ್ದಾರೆ.

ಬೆಂಗಳೂರು(ಮೇ.26): ಪವರ್ ಸ್ಟಾರ್ ಪುನೀತ್ ಎಲ್ಲರಿಗೂ ಅಚ್ಚುಮೆಚ್ಚು. ಮಕ್ಕಳಿಗೂ ಅಪ್ಪು ಅಂದರೆ ಪಂಚಪ್ರಾಣ. ಅದರಂತೆ ಕಳೆದ ಕಲವು ತಿಂಗಳ ಹಿಂದೆ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದ ಪ್ರೀತಿ ಹೆಸರಿನ ಪುಟ್ಟ ಅಭಿಮಾನಿ ಪುನಿತ್ ನೋಡುವ ಆಸೆ ಪಟ್ಟಿದ್ದಳು. ಅದನ್ನು ಸಾಧ್ಯವಾಗಿಸಿದ್ದ ಪುನೀತ್ ಪ್ರೀತಿಗೆ ಮಾತು ಕೊಟ್ಟಂತೆ ಸಹಾಯ ಹಸ್ತ ಚಾಚಿದ್ದಾರೆ.

ದಾವಣಗೆರೆ ಚನ್ನಗಿರಿ ಪ್ರೀತಿ 8ನೇ ಕ್ಲಾಸ್ ಓದುತಿದ್ದಾಳೆ. ತಂದೆ ಕುಮಾರ್ ಧೋಬಿ ಕೆಲಸ ಮಾಡುತ್ತಾರೆ. ಕಷ್ಟದಲ್ಲಿರುವ ಈ ಪ್ರೀತಿಗೆ ಪುನಿತ್ ಅಂದರೆ ಪ್ರಾಣ. ಆದರೆ ಈ ಪುಟ್ಟ ಹುಡುಗಿದಗೆ ಕಿಡ್ನಿ ತೊಂದರೆ ಎದುರಾಗಿದೆ. ಅದೇ ನೋವಲ್ಲೇ ನೆಚ್ಚಿನ ನಾಯಕ ಪುನಿತ್​ ಅವರನ್ನು ನೋಡುವ ಆಸೆ.

ಪ್ರೀತಿ ಕೆಲ ತಿಂಗಳ ಹಿಂದೆ ಕಂಠೀರವದಲ್ಲಿ ಅಪ್ಪುರನ್ನ ಮೀಟ್ ಮಾಡಿ ಖುಷಿನೂ ಪಟ್ಟಿದ್ದಳು. ಅಷ್ಟೇ ಅಲ್ಲ, ಪ್ರೀತಿಯ ತೊಂದರೆಗೆ ಪುನೀತ್ ಸಹಾಯ ಮಾಡುವುದಾಗಿಯೂ ಹೇಳಿ ಕಳುಹಿಸಿದ್ದರು. ಅದು ಈಗ ಕಾರ್ಯರೂಪಕ್ಕೆ ಬರುತ್ತಿದೆ. ಪ್ರೀತಿಗೆ ಇಂದು ಬೆಳಗ್ಗೆ 7 ಗಂಟೆಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಲಾಯಿತು. 12 ವರ್ಷದ ಪುಟ್ಟ ಪ್ರೀತಿಗೆ ಎರಡೂ ಕಿಡ್ನಿ ಹೋಗಿವೆ. ಆದರೆ, 36 ವರ್ಷದ ತಂದೆ ಕುಮಾರ್ ತಮ್ಮ ಒಂದು ಕಿಡ್ನಿ ದಾನ ಮಾಡಿದ್ದಾರೆ. ಡಾಕ್ಟರ್ ಬಲ್ಲಾಳ್​​ ಅವರ ವೈದ್ಯರ ತಂಡ, ಬಿಪಾಜಿಟಿವ್ ರಕ್ತ ಇರುವ ತಂದೆ ಕುಮಾರ್ ಅವರ ಕಿಡ್ನಿಯನ್ನು ಪ್ರೀತಿಗೆ ಕಸಿ ಮಾಡಿದ್ದಾರೆ.

ಓಮೆಗಾ ರಿಹ್ಯಾಬಿಲಿಟೇಷನ್ ಟ್ರಸ್ಟ್ 'ನ ಡಾಕ್ಟರ್ ಆನಂದ್ ಅವರೂ ಬಾಲಕಿ ಪ್ರೀತಿಯ ಕುಟುಂಬಕ್ಕೆ ನೆರವಾಗುತ್ತಿದ್ದಾರೆ. ಪ್ರೀತಿಗೆ ಬೇಗ ಕಿಡ್ನಿ ಕಸಿ ಮಾಡಿ ಅವಳು ಮೊದಲಿನಂತೆ ಓಡಾಡಲಿ ಅಂತ ಜನ ಕೂಡ ಆಸೆ ಪಡುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈ ಹೌಸಿಂಗ್ ಕಾಂಪ್ಲೆಕ್ಸ್‌ನಲ್ಲಿ ಅಗ್ನಿ ದುರಂತ, ನಿರ್ದೇಶಕ ಸಂದೀಪ್ ಸಿಂಗ್ ಸೇರಿ 40 ಮಂದಿ ರಕ್ಷಣೆ
ಹೊಸ ವರ್ಷಕ್ಕೆ ಎಲೆಕ್ಟ್ರಾನಿಕ್ ಸಿಟಿ ಹೈ ಅಲರ್ಟ್; ಮಹಿಳೆಯರ ಸುರಕ್ಷತೆಗೆ 'ರಾಣಿ ಚೆನ್ನಮ್ಮ ಪಡೆ ಸಜ್ಜು, ಪಬ್-ಬಾರ್‌ಗಳಿಗೆ ಪೊಲೀಸರ ಬಿಗಿ ರೂಲ್ಸ್!