'ನಿಮ್ಮ ಆರೋಪಕ್ಕೆ ಪುರಾವೆಯಿದ್ದರೆ ನಮ್ಮನ್ನು ಕೋರ್ಟಿಗೆಳೆಯಿರಿ'

Published : Oct 11, 2016, 10:25 AM ISTUpdated : Apr 11, 2018, 01:00 PM IST
'ನಿಮ್ಮ ಆರೋಪಕ್ಕೆ ಪುರಾವೆಯಿದ್ದರೆ ನಮ್ಮನ್ನು ಕೋರ್ಟಿಗೆಳೆಯಿರಿ'

ಸಾರಾಂಶ

ಪರ್ರಿಕರ್ ಮಾಡಿರುವ ಆರೋಪಕ್ಕೆ ಸರಿಯಾದ ಪುರಾವೆಯಿದ್ದರೆ ನಮ್ಮನ್ನು ಕೋರ್ಟ್ ಗೆ ಎಳೆಯಲಿ ಎಂದು ಕಾಂಗ್ರೆಸ್ ಸವಾಲಾಕಿದೆ.

ನವದೆಹಲಿ (ಅ.11): ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಹೆಲಿಕ್ಯಾಪ್ಟರ್ ಮತ್ತು ಸಬ್ ಮರಿನ್ ಒಪ್ಪಂದದಲ್ಲಿ ಕಾಂಗ್ರೆಸ್ ಪಕ್ಷವು ದಲ್ಲಾಳಿಯಾಗಿತ್ತು ಎಂದ ಮನೋಹರ್ ಪರ್ರಿಕರ್ ಹೇಳಿಕೆಯು ಕಾಂಗ್ರೆಸಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಪರ್ರಿಕರ್ ಮಾಡಿರುವ ಆರೋಪಕ್ಕೆ ಸರಿಯಾದ ಪುರಾವೆಯಿದ್ದರೆ ನಮ್ಮನ್ನು ಕೋರ್ಟ್ ಗೆ ಎಳೆಯಲಿ ಎಂದು ಕಾಂಗ್ರೆಸ್ ಸವಾಲು ಹಾಕಿದೆ. 

“ಒಂದು ವೇಳೆ ಕಾಂಗ್ರೆಸ್ ದಲ್ಲಾಳಿಯಾಗಿದ್ದರೆ ನಮ್ಮ ಮೇಲೆ ಕ್ರಮ ಕೈಗೊಳ್ಳಲಿ. ಯುಪಿಎ ಅವಧಿಯಲ್ಲಿ ರೂ.1.7 ಲಕ್ಷ ಕೋಟಿ ಹಗರಣವಾಗಿದೆ ಎಂದ ಪರ್ರಿಕರ್ ಆರೋಪವು ನಿಜವಾಗಿದ್ದರೆ ನಮ್ಮ ಮೇಲೆ ಎಫ್’ಐಆರ್ ದಾಖಲಿಸಲಿ. ಇದು ಪೇಯ್ಡ್ ಮೀಡಿಯಾ ಸುದ್ಧಿಯಾಗಿದ್ದು ಹಾಗಾಗಿ ಯಾರೂ ಕೂಡಾ ಅವರನ್ನು ಪ್ರಶ್ನಿಸುವುದಿಲ್ಲ. ಆಧಾರವಿದ್ದರೆ ಮಾತನಾಡಲಿ ಇಲ್ಲದಿದ್ದರೆ ಸುಮ್ಮನಿರಲಿ ಎಂದು ಕಾಂಗ್ರೆಸ್ ಮುಖಂಡ ಸಂದೀಪ್ ದೀಕ್ಷಿತ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಲಲಿತಮ್ಮ
ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?