‘ಮೈಸೂರು ದಸರಾ ಬದಲು ಮಹಿಷಾ ದಸರಾ ಆಚರಿಸಿ’

By Suvarna Web DeskFirst Published Sep 19, 2017, 5:13 PM IST
Highlights

ಇಲ್ಲಿನ ಚಾಮುಂಡಿಬೆಟ್ಟದಲ್ಲಿ ಸೋಮವಾರ ವಿವಿಧ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಮಹಿಷಾ ದಸರಾ (ಮೂಲನಿವಾಸಿಗಳ ಮಹಿಷಾ ಸಾಂಸ್ಕೃತಿಕ ಹಬ್ಬ) ಆಚರಿಸಲಾಯಿತು. ಮಹಿಷಾ ದಸರಾ ಉದ್ಘಾಟಿಸಿ ಮಾತನಾಡಿದ ಪ್ರಗತಿಪರ ಚಿಂತಕ ಎ.ಕೆ. ಸುಬ್ಬಯ್ಯ, ವೈದಿಕಶಾಹಿ ಶಕ್ತಿಗಳು ದೇಶದ ನೈಜ ಇತಿಹಾಸವನ್ನು ಮರೆಮಾಚಿದ್ದು, ಆ ಮೂಲಕ ಜನರ ವಿಚಾರ ಶಕ್ತಿಗೆ ಬೇಲಿ ಹಾಕಿದ್ದಾರೆ. ವೈದಿಕಶಾಹಿ ವೈಭವೀಕರಣದ ಮೈಸೂರು ದಸರಾ ಬದಲು ಮಹಿಷಾ ದಸರಾವನ್ನು ನಾಡ ಹಬ್ಬವಾಗಿ ಸರ್ಕಾರ ಆಚರಿಸಬೇಕು ಎಂದರು.

ಮೈಸೂರು: ಇಲ್ಲಿನ ಚಾಮುಂಡಿಬೆಟ್ಟದಲ್ಲಿ ಸೋಮವಾರ ವಿವಿಧ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಮಹಿಷಾ ದಸರಾ (ಮೂಲನಿವಾಸಿಗಳ ಮಹಿಷಾ ಸಾಂಸ್ಕೃತಿಕ ಹಬ್ಬ) ಆಚರಿಸಲಾಯಿತು.

ಮಹಿಷಾ ದಸರಾ ಉದ್ಘಾಟಿಸಿ ಮಾತನಾಡಿದ ಪ್ರಗತಿಪರ ಚಿಂತಕ ಎ.ಕೆ. ಸುಬ್ಬಯ್ಯ, ವೈದಿಕಶಾಹಿ ಶಕ್ತಿಗಳು ದೇಶದ ನೈಜ ಇತಿಹಾಸವನ್ನು ಮರೆಮಾಚಿದ್ದು, ಆ ಮೂಲಕ ಜನರ ವಿಚಾರ ಶಕ್ತಿಗೆ ಬೇಲಿ ಹಾಕಿದ್ದಾರೆ. ವೈದಿಕಶಾಹಿ ವೈಭವೀಕರಣದ ಮೈಸೂರು ದಸರಾ ಬದಲು ಮಹಿಷಾ ದಸರಾವನ್ನು ನಾಡ ಹಬ್ಬವಾಗಿ ಸರ್ಕಾರ ಆಚರಿಸಬೇಕು ಎಂದರು.

ಪತ್ರಿಕೋದ್ಯಮ ಪ್ರಾಧ್ಯಾಪಕ ಮಹೇಶ್ ಚಂದ್ರಗುರು ಮಾತನಾಡಿ, ಮಹಿಷಾ ರಾಕ್ಷಸನಲ್ಲ, ರಕ್ಷಕ. ಮೈಸೂರಿನ ಕೋಲಂಬಿಯಾ ಏಷ್ಯಾ ಆಸ್ಪತ್ರೆ ಬಳಿಯ ವೃತ್ತದಲ್ಲಿ ಮಹಿಷಾಸುರರ ಪ್ರತಿಮೆ ಸ್ಥಾಪಿಸಬೇಕು. ಮೈಸೂರು ವಿವಿಗೆ ಮಹಿಷಾ ವಿವಿ ಎಂದು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.

click me!