
ಬೆಂಗಳೂರು (ಜ.09): ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕ ಚತುರ್ವೇದಿಯವರು ಕರ್ನಾಟಕದಲ್ಲಿದ್ದು, ಅನೇಕರನ್ನು ಭೇಟಿಯಾಗಲು ಇಚ್ಛಿಸುತ್ತೇನೆ ಎಂದು ಹೇಳಲು, ನಾಮ ಕರ್ನಾಟಕ ಎಂದು ತಪ್ಪಾಗಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಟ್ರಾಲ್’ಗೆ ಒಳಗಾಗಿದೆ. ಈಗಾಗಲೇ ಕಾಂಗ್ರಸ್ ಸರ್ಕಾರದಿಂದ ನಾಮ ಹಾಕಿಸಿಕೊಂಡಿದ್ದು, ಇನ್ನೂ ನಾಮ ಹಾಕಿಸಿಕೊಳ್ಳಲು ತಯಾರಿಲ್ಲವೆಂಬುದಾಗಿ ಎಲ್ಲರೂ ಪ್ರತಿಕ್ರಿಯಿಸಿದ್ದಾರೆ.
ಬಳಿಕ ತಮ್ಮ ತಪ್ಪನ್ನು ತಿದ್ದಿಕೊಂಡ ಪ್ರಿಯಾಂಕ ಟ್ವೀಟ್ ಸರಿಪಡಿಸಿದ್ದಾರೆ.
ಈ ಟ್ವೀಟ್’ಗೆ ಪ್ರಿಯಾಂಕ ಚತುರ್ವೇದಿ ಅವರೇ ಕಳೆದ ನಾಲ್ಕೂವರೆ ವರ್ಷಗಳಿಂದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದ ಜನತೆಗೆ ಹಾಕಿದ ನಾಮವೇ ಸಾಕು. ಅದರ ಮೇಲೆ ನೀವು ಇನ್ನೊಂದು ನಾಮ ಹಾಕುವುದು ಬೇಡ ದು ಶಿಲ್ಪಾ ಗಣೇಸ್ ತಮ್ಮ ಫೇಸ್’ಬುಕ್’ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.