ಕನ್ನಡಿಗರು ನಾಮ ಹಾಕಿಸಿಕೊಳ್ಳಲು ರೆಡಿ ಇಲ್ಲ : ಕಾಂಗ್ರೆಸ್ ವಕ್ತಾರೆ ಟ್ವೀಟ್’ಗೆ ಟ್ರಾಲ್

By Suvarna Web DeskFirst Published Jan 9, 2018, 1:15 PM IST
Highlights

ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕ ಚತುರ್ವೇದಿಯವರು ಕರ್ನಾಟಕದಲ್ಲಿದ್ದು, ಅನೇಕರನ್ನು ಭೇಟಿಯಾಗಲು ಇಚ್ಛಿಸುತ್ತೇನೆ ಎಂದು ಹೇಳಲು, ನಾಮ ಕರ್ನಾಟಕ ಎಂದು ತಪ್ಪಾಗಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಟ್ರಾಲ್’ಗೆ ಒಳಗಾಗಿದೆ.

ಬೆಂಗಳೂರು (ಜ.09): ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕ ಚತುರ್ವೇದಿಯವರು ಕರ್ನಾಟಕದಲ್ಲಿದ್ದು, ಅನೇಕರನ್ನು ಭೇಟಿಯಾಗಲು ಇಚ್ಛಿಸುತ್ತೇನೆ ಎಂದು ಹೇಳಲು, ನಾಮ ಕರ್ನಾಟಕ ಎಂದು ತಪ್ಪಾಗಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಟ್ರಾಲ್’ಗೆ ಒಳಗಾಗಿದೆ. ಈಗಾಗಲೇ ಕಾಂಗ್ರಸ್ ಸರ್ಕಾರದಿಂದ ನಾಮ ಹಾಕಿಸಿಕೊಂಡಿದ್ದು, ಇನ್ನೂ ನಾಮ ಹಾಕಿಸಿಕೊಳ್ಳಲು ತಯಾರಿಲ್ಲವೆಂಬುದಾಗಿ ಎಲ್ಲರೂ ಪ್ರತಿಕ್ರಿಯಿಸಿದ್ದಾರೆ.

ಬಳಿಕ ತಮ್ಮ ತಪ್ಪನ್ನು ತಿದ್ದಿಕೊಂಡ ಪ್ರಿಯಾಂಕ ಟ್ವೀಟ್ ಸರಿಪಡಿಸಿದ್ದಾರೆ.

ಈ ಟ್ವೀಟ್’ಗೆ ಪ್ರಿಯಾಂಕ ಚತುರ್ವೇದಿ ಅವರೇ ಕಳೆದ ನಾಲ್ಕೂವರೆ ವರ್ಷಗಳಿಂದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದ ಜನತೆಗೆ ಹಾಕಿದ ನಾಮವೇ ಸಾಕು. ಅದರ ಮೇಲೆ ನೀವು ಇನ್ನೊಂದು ನಾಮ ಹಾಕುವುದು ಬೇಡ ದು ಶಿಲ್ಪಾ ಗಣೇಸ್ ತಮ್ಮ ಫೇಸ್’ಬುಕ್’ನಲ್ಲಿ ಪ್ರತಿಕ್ರಿಯಿಸಿದ್ದಾರೆ.

 

Guys, am learning , so I can be spared the little mistake. Just realised the error and have corrected :))

ನಮಸ್ಕಾರ ಕರ್ನಾಟಕ! ನಾನು ಇಂದು KPCC ಬೆಂಗಳೂರಿನಲ್ಲಿದ್ದೇನೆ. 9, 10 ಮತ್ತು 11 ನೇ. ತಾರೀಕು, ನಿಮ್ಮಲ್ಲಿ ಅನೇಕರನ್ನು ಭೇಟಿ ಮಾಡಲು ನಾನು ಆಶಿಸುತ್ತೇನೆ https://t.co/PBv34qQPHo

— Priyanka Chaturvedi (@priyankac19)

ನಾಮ ಕರ್ನಾಟಕ! ನಾನು ಇಂದು KPCC ಬೆಂಗಳೂರಿನಲ್ಲಿದ್ದೇನೆ, 9 ನೇ, 10 ಮತ್ತು 11 ನೇ. ನಿಮ್ಮಲ್ಲಿ ಅನೇಕರನ್ನು ಭೇಟಿ ಮಾಡಲು ಆಶಿಸುತ್ತೇವೆ! pic.twitter.com/HPQ5yHil71

— Priyanka Chaturvedi (@priyankac19)
click me!