ಹೆಂಡತಿ ಸಹಕರಿಸಿಲ್ಲವೆಂದು ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ ಪ್ರಿನ್ಸಿಪಾಲ್!

Published : Feb 03, 2017, 05:49 AM ISTUpdated : Apr 11, 2018, 12:36 PM IST
ಹೆಂಡತಿ ಸಹಕರಿಸಿಲ್ಲವೆಂದು ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ ಪ್ರಿನ್ಸಿಪಾಲ್!

ಸಾರಾಂಶ

ಬೆಂಗಳೂರಿನ ಸದಾಶಿವನಗರದ ಸರ್ಕಾರಿ ಶಾಲೆಯ ಪ್ರಿನ್ಸಿಪಾಲ್ ಅಶ್ಲೀಲ ಮೆಸೇಜ್​ ಕಳುಹಿಸುತ್ತಿದ್ದ ಆರೋಪ ಕೇಳಿ ಬಂದಿದೆ. ವಾಟ್ಸಾಪ್​ ಮೂಲಕ ಅಶ್ಲೀಲ ಮೆಸೇಜ್​ ಕಳುಹಿಸುತ್ತಿದ್ದ ಪ್ರಿನ್ಸಿಪಾಲ್​ ಕುಮಾರ್ ಠಾಕೂರ್​ ಬಣ್ಣ ಬಯಲಾಗಿದೆ. ಇನ್ನು ಪ್ರಿನ್ಸಿಪಾಲ್​ ಕಿರುಕುಳ ನೀಡುತ್ತಿದ್ದ ಬಗ್ಗೆ ಜನವರಿ 14ರಂದು ಚೈಲ್ಡ್ ಹೆಲ್ಪ್​ ಲೈನ್'​ಗೆ  ಶಿಕ್ಷಕಿಯರು ದೂರು ನೀಡಿದ್ದರು. ಈ ಬಗ್ಗೆ ಹೇಳಿಕೆ ಪಡೆದ ಚೈಲ್ಡ್ ಲೈನ್ ಅಧಿಕಾರಿಗಳು, ಜನವರಿ 24ರಂದು ಪೊಲೀಸ್ ಆಯುಕ್ತ ಪ್ರವೀಣ್​ ಸೂದ್​ಗೆ ದೂರು ನೀಡಿದ್ದರು.

ಬೆಂಗಳೂರು(ಫೆ.03): ಹೆಂಡತಿ ಸಹಕರಿಸದೆ ಇದ್ದಿದ್ದಕ್ಕೆ ಪ್ರಿನ್ಸಿಪಾಲೊಬ್ಬ ವಿದ್ಯಾರ್ಥಿಗಳಿಗೆ,  ಶಿಕ್ಷಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 

ಬೆಂಗಳೂರಿನ ಸದಾಶಿವನಗರದ ಸರ್ಕಾರಿ ಶಾಲೆಯ ಪ್ರಿನ್ಸಿಪಾಲ್ ಅಶ್ಲೀಲ ಮೆಸೇಜ್​ ಕಳುಹಿಸುತ್ತಿದ್ದ ಆರೋಪ ಕೇಳಿ ಬಂದಿದೆ. ವಾಟ್ಸಾಪ್​ ಮೂಲಕ ಅಶ್ಲೀಲ ಮೆಸೇಜ್​ ಕಳುಹಿಸುತ್ತಿದ್ದ ಪ್ರಿನ್ಸಿಪಾಲ್​ ಕುಮಾರ್ ಠಾಕೂರ್​ ಬಣ್ಣ ಬಯಲಾಗಿದೆ. ಇನ್ನು ಪ್ರಿನ್ಸಿಪಾಲ್​ ಕಿರುಕುಳ ನೀಡುತ್ತಿದ್ದ ಬಗ್ಗೆ ಜನವರಿ 14ರಂದು ಚೈಲ್ಡ್ ಹೆಲ್ಪ್​ ಲೈನ್'​ಗೆ  ಶಿಕ್ಷಕಿಯರು ದೂರು ನೀಡಿದ್ದರು. ಈ ಬಗ್ಗೆ ಹೇಳಿಕೆ ಪಡೆದ ಚೈಲ್ಡ್ ಲೈನ್ ಅಧಿಕಾರಿಗಳು, ಜನವರಿ 24ರಂದು ಪೊಲೀಸ್ ಆಯುಕ್ತ ಪ್ರವೀಣ್​ ಸೂದ್​ಗೆ ದೂರು ನೀಡಿದ್ದರು.

ಆದರೆ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸದೆ, ಬೇರೆ ಸೆಕ್ಷನ್ ಹಾಕಿರುವ ಆರೋಪ ಕೇಳಿ ಬಂದಿದೆ. ಪ್ರಕರಣದನ್ವಯ ಜನವರಿ 31ಕ್ಕೆ ಪ್ರಿನ್ಸಿಪಾಲ್​ ಕುಮಾರ್ ಠಾಕೂರ್'​ನನ್ನು ಬಂಧಿಸಿ ಫೆಬ್ರವರಿ 1ಕ್ಕೆ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹತ್ವದ ಉಪಗ್ರಹ ಲಾಂಚ್‌ಗೂ ಮೊದಲು ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದ ಇಸ್ರೋ ವಿಜ್ಞಾನಿಗಳ ತಂಡ
ಸ್ವಚ್ಛ ಮಂಗಳೂರು ಮತ್ತೆ ಮಲೀನ: ರಸ್ತೆಗಳಲ್ಲಿ ರಾಶಿ ಬಿದ್ದ ಕಸ, ಇದಕ್ಕೆ ಹೊಣೆ ಯಾರು?