
ಕಲಬುರಗಿ: ದೇವ್ರು ವರ ಕೊಟ್ರೂ ಪೂಜಾರಿ ಕೊಡಲಿಲ್ಲ ಅನ್ನೋದು ಹಳೇ ಗಾದೆ. ಭಕ್ತ ದೇಣಿಗೆ ಕೊಟ್ರೂ ಪೂಜಾರಿ ದೇವರಿಗೆ ಕೊಡಲಿಲ್ಲ ಎಂಬ ಹೊಸ ಗಾದೆ ಸೇರ್ಪಡೆ ಮಾಡಬೇಕಾದ ಸನ್ನಿವೇಶವನ್ನು ಇಲ್ಲೊಬ್ಬ ಪೂಜಾರಿ ಸೃಷ್ಟಿಸಿದ್ದಾರೆ.
ಕಲಬುರಗಿಯಲ್ಲೊಬ ಪೂಜಾರಿ, ಭಕ್ತರು ಹುಂಡಿಗೆ ಹಾಕಿದ ಹಣ ಎಣಿಕೆ ಸಂದರ್ಭದಲ್ಲಿ ಒಂದಿಷ್ಟು ಹಣ ದೇವರಿಗೂ ಕಾಣದಂತೆ ತನ್ನ ಜೇಬಿಗೆ ಹಾಕಿಕೊಂಡಿದ್ದಾನೆ. ಆದ್ರೆ, ದೇವರಿಗೆ ಕಾಣದ ಪೂಜಾರಿ ಕೈಚಳಕ ಸಿಸಿಟಿವಿ ಕ್ಯಾಮರಾ ಕಣ್ಣಿಗೆ ಕಂಡಿದೆ.
ಅಂದಹಾಗೇ ಇದಾಗಿದ್ದು ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಹಳಕರ್ಟಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ. ದೇವಸ್ಥಾನದ ಹುಂಡಿ ಹಣ ಎಣಿಸುವ ವೇಳೆ ದೇವಸ್ಥಾನದ ಸಮಿತಿಯ ಸದಸ್ಯನು ಆಗಿರುವ ಪೂಜಾರಿ ಈ ಮೋಸದಾಟ ಆಡಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.