ಏಕಕಾಲದ ಚುನಾವಣೆಗೆ ರಾಷ್ಟ್ರಪತಿ ಪ್ರಣಬ್ ಬೆಂಬಲ : ಗಣರಾಜ್ಯೋತ್ಸವದ ಭಾಷಣದಲ್ಲಿ ಪ್ರಣಬ್ ಅಭಿಮತ

Published : Jan 25, 2017, 06:14 PM ISTUpdated : Apr 11, 2018, 12:40 PM IST
ಏಕಕಾಲದ ಚುನಾವಣೆಗೆ ರಾಷ್ಟ್ರಪತಿ ಪ್ರಣಬ್ ಬೆಂಬಲ : ಗಣರಾಜ್ಯೋತ್ಸವದ ಭಾಷಣದಲ್ಲಿ ಪ್ರಣಬ್ ಅಭಿಮತ

ಸಾರಾಂಶ

‘‘ಬಹುತ್ವ ಮತ್ತು ವೈವಿಧ್ಯತೆಯತೆಯಲ್ಲಿ ದೇಶದ ಶಕ್ತಿ ಅಡಗಿದೆ. ‘ಭಾರತವು ಯಾವತ್ತೂ ‘ವಾದ-ಪ್ರತಿವಾದ ನಡೆಸುವ ‘ಭಾರತೀಯ’ನನ್ನು ಮೆಚ್ಚುತ್ತದೆಯೇ ಹೊರತು, ‘ಅಸಹಿಷ್ಣು ‘ಭಾರತೀಯನನ್ನಲ್ಲ’’ ಎಂದಿದ್ದಾರೆ ಪ್ರಣಬ್.

ನವದೆಹಲಿ(ಜ.25): ವಿಧಾನ ಸಭೆ ಮತ್ತು ಲೋಕಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ಪ್ರಧಾನಿ ಮೋದಿ ಅವರ ಇಂಗಿತಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ‘ಧನಿಗೂಡಿಸಿದ್ದಾರೆ. ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿದ ಏಕಕಾಲಕ್ಕೆ ಚುನಾವಣೆ ನಡೆಸುವ ಯೋಜನೆಯನ್ನು ಅನುಷ್ಠಾನ ಮಾಡಿ ಎಂದು ಚುನಾವಣಾ ಆಯೋಗಕ್ಕೆ ಅವರು ಸಲಹೆ ನೀಡಿದ್ದಾರೆ. ಜತೆಗೆ, ಕೇಂದ್ರ ಸರ್ಕಾರದ ನೋಟು ಅಮಾನ್ಯ ಕ್ರಮವನ್ನೂ ಅವರು ಬೆಂಬಲಿಸಿದ್ದಾರೆ.

ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡುವ ವೇಳೆ ರಾಷ್ಟ್ರಪತಿ ಪ್ರಣಬ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ‘‘ಬಹುತ್ವ ಮತ್ತು ವೈವಿಧ್ಯತೆಯತೆಯಲ್ಲಿ ದೇಶದ ಶಕ್ತಿ ಅಡಗಿದೆ. ‘ಭಾರತವು ಯಾವತ್ತೂ ‘ವಾದ-ಪ್ರತಿವಾದ ನಡೆಸುವ ‘ಭಾರತೀಯ’ನನ್ನು ಮೆಚ್ಚುತ್ತದೆಯೇ ಹೊರತು, ‘ಅಸಹಿಷ್ಣು ‘ಭಾರತೀಯನನ್ನಲ್ಲ’’ ಎಂದಿದ್ದಾರೆ ಪ್ರಣಬ್.

‘‘ನಮ್ಮ ದೇಶದಲ್ಲಿ ಶತಮಾನಗಳಿಂದಲೂ ಬಹು ದೃಷ್ಟಿಕೋನಗಳು, ಬಹು ಆಲೋಚನೆಗಳು ಹಾಗೂ ತತ್ವ-ಸಿದ್ಧಾಂತಗಳು ಶಾಂತಿಯುತವಾಗಿ ಪರಸ್ಪರ ಸ್ಪರ್ಧೆ ಮಾಡಿಕೊಂಡು ಬಂದಿವೆ. ಪ್ರಜಾಸತ್ತೆಯು ಪ್ರಕಾಶಿಸಬೇಕೆಂದರೆ ಬುದ್ಧಿವಂತ ಮತ್ತು ಸೂಕ್ಷ್ಮ ವಿವೇಚನೆಯ ಮನಸ್ಸುಗಳು ಬೇಕು,’’ ಎಂದೂ ಪ್ರಣಬ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಟ್ಕಳ ತಹಸೀಲ್ದಾರ್ ಕಚೇರಿಗೆ ಬಾಂಬ್ ಬೆದರಿಕೆ: ಇಮೇಲ್‌ನಲ್ಲಿ ಡಿಎಂಕೆ ವಿರುದ್ಧ ಅಸಂಬದ್ಧ ಆರೋಪ
ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 7 ಬಸ್ 3 ಕಾರುಗಳ ಮಧ್ಯೆ ಸರಣಿ ಅಪಘಾತ : ನಾಲ್ವರು ಬೆಂಕಿಗಾಹುತಿ