ಸರ್ಜಿಕಲ್ ದಾಳಿ ವೀರರಿಗೆ ಶೌರ್ಯ ಪ್ರಶಸ್ತಿ

Published : Jan 25, 2017, 05:52 PM ISTUpdated : Apr 11, 2018, 12:57 PM IST
ಸರ್ಜಿಕಲ್ ದಾಳಿ ವೀರರಿಗೆ ಶೌರ್ಯ ಪ್ರಶಸ್ತಿ

ಸಾರಾಂಶ

ಕರ್ನಲ್ ಕಪಿಲ್ ಯಾದವ್ ಮತ್ತು ಕರ್ನಲ್ ಹರ್‌ಪ್ರೀತ್  ಅವರಿಗೆ ಯುದ್ಧ ಸೇವಾ ಪದಕ ನೀಡಿ ಗೌರವಿಸಲಾಗುತ್ತಿದೆ. ಐವರು ಸಿಬ್ಬಂದಿಗೆ ಶೌರ್ಯ ಚಕ್ರ ಮತ್ತು 13 ಮಂದಿಗೆ ಸೇನಾ ಪದಕಕ್ಕೆ ಆಯ್ಕೆಯಾಗಿದ್ದಾರೆ.

ನವದೆಹಲಿ(ಜ.25): ಇತ್ತೀಚೆಗಷ್ಟೇ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಅಲ್ಲಿನ ಉಗ್ರರ ನೆಲೆಗಳನ್ನು ‘ಧ್ವಂಸ ಮಾಡಿ ಬಂದ ಅರೆಸೇನಾ ಪಡೆಯ ವಿಶೇಷ ದಳದ 19 ಯೋಧರಿಗೆ ಶೌರ್ಯ ಮತ್ತು ಕೀರ್ತಿ ಚಕ್ರ ಪ್ರಕಟಿಸಲಾಗಿದೆ. ಈ ವೀರ ಯೋಧರನ್ನು ಮುನ್ನಡೆಸಿದ ಕಮಾಂಡಿಂಗ್ ಅಧಿಕಾರಿಗಳಿಗೆ ಯುದ್ಧ ಸೇವಾ ಪದಕ ಘೋಷಿಸಲಾಗಿದೆ. ‘ಭಯೋತ್ಪಾದನಾ ನಿಗ್ರಹಕ್ಕಾಗಿ ಎಲ್‌ಒಸಿ ದಾಟಿದ ತಂಡದ ಯೋಧರಲ್ಲೊಬ್ಬರಾಗಿರುವ ಮೇಜರ್ ರೋಹಿತ್ ಸೂರಿ ಅವರಿಗೆ ಕೀರ್ತಿ ಚಕ್ರ ನೀಡಿ ಗೌರವಿಸಲಾಗುತ್ತಿದೆ. ಹವಿಲ್ದಾರ್ ಪ್ರೇಮ್ ಬಹಾದೂರ್ ರೇಸ್ಮಿ ಮಗರ್ ಅವರಿಗೆ ಮರಣೋತ್ತರವಾಗಿ ಕೀರ್ತಿ ಚಕ್ರ ಪ್ರಕಟಿಸಲಾಗಿದೆ.

ಕರ್ನಲ್ ಕಪಿಲ್ ಯಾದವ್ ಮತ್ತು ಕರ್ನಲ್ ಹರ್‌ಪ್ರೀತ್  ಅವರಿಗೆ ಯುದ್ಧ ಸೇವಾ ಪದಕ ನೀಡಿ ಗೌರವಿಸಲಾಗುತ್ತಿದೆ. ಐವರು ಸಿಬ್ಬಂದಿಗೆ ಶೌರ್ಯ ಚಕ್ರ ಮತ್ತು 13 ಮಂದಿಗೆ ಸೇನಾ ಪದಕಕ್ಕೆ ಆಯ್ಕೆಯಾಗಿದ್ದಾರೆ. ಸೆಪ್ಟಂಬರ್‌ನಲ್ಲಿ ಜಮ್ಮು-ಕಾಶ್ಮೀರದ ಉರಿ ಸೇನಾ ಶಿಬಿರದ ಮೇಲೆ ನಡೆದ ‘ಭಯೋತ್ಪಾದಕ ದಾಳಿಯ ಬಳಿಕ ‘ಭಾರತೀಯ ಸೇನೆಯು ಸರ್ಜಿಕಲ್ ದಾಳಿ ನಡೆಸಿ, ‘ಭಯೋತ್ಪಾದಕ ಶಿಬಿರವನ್ನು ನಾಶಗೊಳಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಂಗಳೂರಿನಲ್ಲಿ ರಿಷಬ್ ಶೆಟ್ಟಿ ಹರಕೆ ನೇಮ ವಿವಾದ, ತಮ್ಮಣ್ಣ ಶೆಟ್ಟಿ ಎತ್ತಿದ ಹಲವು ಪ್ರಶ್ನೆಗಳಿವು
ಬೆಂಗಳೂರಲ್ಲಿ ಚಿನ್ನದ ಬೆಲೆ 15,200 ರೂ ಇಳಿಕೆ, ಬಂಗಾರ ಖರೀದಿಗೆ ಇದು ಸೂಕ್ತ ಸಮಯವೇ?