ಮಂಗಳೂರು ಪಬ್ ದಾಳಿ: ಆರೋಪಿಗಳ ಖುಲಾಸೆ ಸರಿನಾ? ಕಾಂಗ್ರೆಸ್ಸನ್ನು ಪ್ರಶ್ನೆ ಮಾಡಿ ಎಂದ ಪ್ರಕಾಶ್ ರೈ

By Suvarnanews Web DeskFirst Published Mar 14, 2018, 12:21 PM IST
Highlights

ಪಬ್ ದಾಳಿ ಆರೋಪಿಗಳ ಖುಲಾಸೆಗೆ ಪ್ರಕಾಶ್ ರೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ಮಂಗಳೂರು (ಮಾ. 14):  ಪಬ್ ದಾಳಿ ಆರೋಪಿಗಳ ಖುಲಾಸೆಗೆ ಪ್ರಕಾಶ್ ರೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ಸಾಕ್ಷ್ಯಗಳಿದ್ದರೂ ನ್ಯಾಯಾಂಗ ವ್ಯವಸ್ಥೆ ಅವರನ್ನ ಖುಲಾಸೆ ಮಾಡಿದೆ ಆದ್ರೆ ಇದು ನಿಮಗೆ ಸರಿ ಅನಿಸುತ್ತಾ? ಹೆಣ್ಣು ಮಕ್ಕಳನ್ನು ಹೊಡೆದ ವೀಡಿಯೋ ಕೂಡ ಇದೆ. ವಿಡಿಯೋ ಜೊತೆಗೆ  ಮತ್ತೊಂದು ಸಾಕ್ಷ್ಯ ಬೇಕಾ? ಇಷ್ಟೆಲ್ಲಾ ಇದ್ದರೂ ಆರೋಪಿಗಳನ್ನು ಖುಲಾಸೆ ಮಾಡ್ತಾರೆ ಅಂದ್ರೆ ಏನ್ ಹೇಳೋದು?  ಹಲ್ಲೆ ಮಾಡಿದವರು  ಒಂದು ವರ್ಗಕ್ಕೆ ಸೇರಿದವರು. ಈಗ ಯಾಕೆ ಕಾಂಗ್ರೆಸ್ ಸರ್ಕಾರ ಪ್ರಶ್ನೆ ಮಾಡ್ತಿಲ್ಲ? ಈ ಚುನಾವಣೆಯಲ್ಲಿ ನಾವು ಕಾಂಗ್ರೆಸ್ಸನ್ನ ಪ್ರಶ್ನೆ ಮಾಡಬೇಕಿದೆ.  ಪಬ್ ದಾಳಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರಶ್ನೆ ಮಾಡಿ ಎಂದಿದ್ದಾರೆ. 

 

click me!