ತಟ್ಟೆ ಇಲ್ಲವೆಂದು ಬಡ ಮಹಿಳಾ ರೋಗಿಗೆ ನೆಲದ ಮೇಲೆ ಊಟ ಬಡಿಸಿದ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ

Published : Sep 24, 2016, 10:50 AM ISTUpdated : Apr 11, 2018, 12:57 PM IST
ತಟ್ಟೆ ಇಲ್ಲವೆಂದು ಬಡ ಮಹಿಳಾ ರೋಗಿಗೆ ನೆಲದ ಮೇಲೆ ಊಟ ಬಡಿಸಿದ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ

ಸಾರಾಂಶ

ರಾಂಚಿ (ಸೆ.24): ಮಹಿಳಾ ರೋಗಿಗೆ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ನೆಲದ ಮೇಲೆ ಊಟ ಬಡಿಸಿರುವ ಅಘಾತಕಾರಿ ಘಟನೆ ರಾಂಚಿಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಕೈಮುರಿತಕ್ಕೊಳಗಾಗಿ ರಾಂಚಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ದಾಖಲಾಗಿದ್ದ ಪಲ್ಮತಿ ದೇವಿ ಎಂಬಾಕೆ ಸಿಬ್ಬಂದಿಯ ಬಳಿ ಊಟ ಕೊಡುವಂತೆ ಕೇಳಿಕೊಂಡಿದ್ದಾಳೆ. ಊಟ ಕೊಡಲು ಸಿಬ್ಬಂದಿ ಮೊದಲು ನಿರಾಕರಿಸಿದ್ದಾರೆ. ಬಳಿಕ ತಟ್ಟೆಗಳು ಇಲ್ಲ ಎಂಬ ಕಾರಣವನ್ನು ಮುಂದಿಟ್ಟುಕೊಂಡು ನೆಲದ ಮೇಲೆಯೇ ಊಟ ಬಡಿಸಿದ್ದಾರೆ.

ಹಸಿವಿನಿಂದ ಕಂಗಾಲಾಗಿದ್ದ ದೇವಿ ಬೇರೆ ವಿಧಿಯಿಲ್ಲದೇ ನೆಲದ ಮೇಲೆಯೇ ಬಡಿಸಿದ ಅನ್ನ-ಸಾರನ್ನು ತಿಂದಿದ್ದಾಳೆ.

ಪಲ್ಮತಿ ದೇವಿ ನೆಲದ ಮೇಲೆ ಬಡಿಸಲಾದ ಊಟಮಾಡುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಜನರು ಆಸ್ಪತ್ರೆ ಹಾಗೂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ತದನಂತರ ಆಸ್ಪತ್ರೆ ನಿರ್ದೇಶಕ ಘಟನೆಯ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆಜಾನ್‌ ಚರ್ಚೆ ವೇಳೆ ದೀಪಾವಳಿ ಪಟಾಕಿ ವಿಚಾರ ಎತ್ತಿದ ಖಂಡ್ರೆ ಕೈ-ಬಿಜೆಪಿ ನಡುವೆ ಗದ್ದಲ
ಶಿವಾನಂದ ಮಠದ ಸರಸ್ವತಿ ಸ್ವಾಮಿಯ ಕಾಮ ಪುರಾಣ; ಬೆತ್ತಲೆಯಾಗಿ ಎಣ್ಣೆ ಮಸಾಜ್ ಮಾಡಿಸ್ಕೊಂಡ!