ದಾಳಿ ವೇಳೆ ಮುಂಬೈಯ ಮೂಲದ ಯುವತಿಯ ರಕ್ಷಣೆ
ಬೆಳಗಾವಿ(ಸೆ.24): ಬೆಳಗಾವಿಯಲ್ಲಿ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ಧಾರೆ. ನಗರದ ಟಿಳಕವಾಡಿ ಅಪಾರ್ಟ್` ಮೆಂಟ್ನಲ್ಲಿ ನಡೆಯುತ್ತಿದ್ದ ಮಾಂಸದ ದಂಧೆ ಮೇಲೆ ದಾಳಿ ನಡೆದಿದೆ.
ಡಿಸಿಪಿ ಅಮರನಾಥ ರೆಡ್ಡಿ ಮಾರ್ಗದರ್ಶನದಲ್ಲಿ ಸಿಸಿಬಿ ಇನ್ಸ್`ಪೆಕ್ಟರ್ ಬಿ.ಆರ್.ಗಡ್ಡೇಕರ್ ನೇತೃತ್ವದ ತಂಡದ ಕಾರ್ಯಾಚರಣೆ ನಡೆಸಿದೆ. ಮುಂಬೈಯ ಮೂಲದ ಯುವತಿಯನ್ನ ರಕ್ಷಣೆ ಮಾಡಲಾಗಿದೆ.
ಪ್ರತಿ ಐದು ದಿನಕ್ಕೊಮ್ಮೆ ಹುಡುಗಿಯರನ್ನ ಬದಲಾವಣೆ ಮಾಡುತ್ತಿದ ಪ್ರವೀಣನನ್ನ ಪೊಲೀಸರು ಬಂಧಿಸಿದ್ದಾರೆ. ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.