
ನವದೆಹಲಿ(ಜ.): ತಮಿಳು ನಾಡು ರಾಜಕೀಯ ನಾಯಕರು ತಾವು ಹಿಡಿದ ಹಠವನ್ನು ಸಾಧಿಸುತ್ತೇವೆ ಎನ್ನುವುದಕ್ಕೆ ಕೇಂದ್ರದ ಮತ್ತೊಂದು ಘೋಷಣೆ ಸಾಕ್ಷಿಯಾಗಿದೆ. ಕೇಂದ್ರ ಸರ್ಕಾರವು ತಮಿಳುನಾಡಿನ ಜನಪ್ರಿಯ ಧಾರ್ಮಿಕ ಹಬ್ಬ ಸಂಕ್ರಾಂತಿ ಎಂದೇ ಪ್ರಸಿದ್ಧಿಯಾದ 'ಪೊಂಗಲ್' ಹಬ್ಬವನ್ನು ರಾಷ್ಟ್ರೀಯ ಧಾರ್ಮಿಕ ಹಬ್ಬವನ್ನಾಗಿಸಿ ಕಡ್ಡಾಯ ರಜೆ ಘೋಷಿಸಿದೆ.
ಈ ಮೊದಲು ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಮಾತ್ರ ಸಂಕ್ರಾಂತಿಗೆ ಕಡ್ಡಾಯ ರಜೆಯಾಗಿ ಘೋಷಿಸಲಾಗಿತ್ತು. ಇನ್ನು ಮುಂದೆ ಪೊಂಗಲ್' ಹಬ್ಬಕ್ಕೆ ರಾಷ್ಟ್ರದಾದ್ಯಂತ ಕಡ್ಡಾಯ ರಜೆ ನೀಡಲಾಗುತ್ತದೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರ ಒತ್ತಡಕ್ಕೆ ಮಣಿದಿರುವ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.