ಶ್ರೀನಿವಾಸ್‌ ಕೊಲೆಗೆ ಪ್ರಭಾವಿಗಳ ಸುಪಾರಿ?

Published : Feb 05, 2017, 08:32 AM ISTUpdated : Apr 11, 2018, 12:47 PM IST
ಶ್ರೀನಿವಾಸ್‌ ಕೊಲೆಗೆ ಪ್ರಭಾವಿಗಳ ಸುಪಾರಿ?

ಸಾರಾಂಶ

ಶ್ರೀನಿವಾಸ್‌ಗೆ ವಿರೋ​ಧಿಗಳು ಹೆಚ್ಚು. ಇವರಲ್ಲಿ ಕೆಲವರು ರಾಜಕೀಯವಾಗಿ ಪ್ರಭಾ ವಿ​ಗಳಾಗಿದ್ದು, ಯಾವ ಕಾರಣಕ್ಕೆ ಕೊಲೆ ಯತ್ನ ನಡೆದಿದೆ ಎಂಬುದು ಖಚಿತವಾಗಿಲ್ಲ. ಕೊಲೆಗೆ ಹೊರ ರಾಜ್ಯ​ದವರಿಗೆ ಸುಪಾರಿ ಕೊಟ್ಟಿ​ದ್ದರು ಎಂಬುದು ತನಿಖೆಯಲ್ಲಿ ಗೊತಾ​ಗಿದೆ.  

ಬೆಂಗಳೂರು (ಫೆ.06): ಶುಕ್ರವಾರ ನಡೆದಿದ್ದ ದಾಸನಪುರ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್‌ ಶೂಟೌಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆಗೆ ಪ್ರಭಾವಿ ಶಕ್ತಿಗಳು ಸುಪಾರಿ ನೀಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಈಶಾನ್ಯ ವಿಭಾಗದ ಪೊಲೀಸರ ಪ್ರಾಥಮಿಕ ಹಂತದ ತನಿಖೆಯಲ್ಲಿ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಶ್ರೀನಿವಾಸ್‌ ಅವರ ಎದುರಾಳಿ ರೌಡಿ ಗುಂಪುಗಳಾದ ಭವಾನಿ ಶಂಕರ, ಕಾಮಾಕ್ಷಿಪಾಳ್ಯದ ಮಚ್ಚಾ ಹಾಗೂ ಬೆತ್ತನಗೆರೆ ಸೀನನ ಸಹಚರರು ಸೇರಿದಂತೆ 150ಕ್ಕೂ ಅಧಿಕ ರೌಡಿಗಳನ್ನು ಠಾಣೆಗೆ ಕರೆಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಶ್ರೀನಿವಾಸ್‌ ಸಹಚರ ಮಾಚೋಳ್ಳಿ ಲೋಕಿ ಎಂಬಾತನನ್ನು ಪೊಲೀಸರು ಪ್ರಶ್ನಿಸಿ​ದ್ದಾರೆ ಎಂದು ತಿಳಿದು ಬಂದಿದೆ.
ಶ್ರೀನಿವಾಸ್‌ಗೆ ವಿರೋ​ಧಿಗಳು ಹೆಚ್ಚು. ಇವರಲ್ಲಿ ಕೆಲವರು ರಾಜಕೀಯವಾಗಿ ಪ್ರಭಾ ವಿ​ಗಳಾಗಿದ್ದು, ಯಾವ ಕಾರಣಕ್ಕೆ ಕೊಲೆ ಯತ್ನ ನಡೆದಿದೆ ಎಂಬುದು ಖಚಿತವಾಗಿಲ್ಲ. ಕೊಲೆಗೆ ಹೊರ ರಾಜ್ಯ​ದವರಿಗೆ ಸುಪಾರಿ ಕೊಟ್ಟಿ​ದ್ದರು ಎಂಬುದು ತನಿಖೆಯಲ್ಲಿ ಗೊತಾ​ಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಹೂದಿಗಳ 'ಬೆಳಕಿನ ಹಬ್ಬ'ದಂದೇ ಭಯೋತ್ಪಾದಕ ದಾಳಿ! ಹನುಕ್ಕಾ ಫೆಸ್ಟಿವಲ್ ಮಹತ್ವ, ಇತಿಹಾಸ ತಿಳಿಯಿರಿ
ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ, ವಿವಿಐಪಿಗೆ ಐದು ಹೆಲಿಪ್ಯಾಡ್ ವ್ಯವಸ್ಥೆ!