
ಬೆಂಗಳೂರು (ಡಿ.13): ನನಗೆ ಭದ್ರತೆ ಬೇಕು. ಈಗಾಗಲೆ ಸಿಎಂ, ಹೋಮ್ ಮಿನಿಸ್ಟರ್'ರನ್ನು ಭೇಟಿ ಮಾಡಿದ್ದೇವೆ. ಹೀಗಾಗಿ ಯಾಕೆ ಭದ್ರತೆ ಬೇಕು ಅಂತ ಇಂಟಲಿಜೆನ್ಸ್'ನವರು ಕರೆ ಮಾಡಿದ್ದರು. ಹೀಗಾಗಿ ಬಂದು ಮಾಹಿತಿ ನೀಡಿದ್ದೇನೆ ಎಂದು ಸುನೀಲ್ ಹೆಗ್ಗರವಳ್ಳಿ ಸುವರ್ಣ ನ್ಯೂಸ್'ಗೆ ಹೇಳಿದ್ದಾರೆ.
ಈಗಾಗಲೆ ಮನೆಯ ಬಳಿ ಲೋಕಲ್ ಪೊಲೀಸರನ್ನು ಹಾಕಿದ್ದಾರೆ. ಡಿಸಿಪಿ ಶರಣಪ್ಪ ಮುಖಾಂತರ ಸುಬ್ರಹ್ಮಣ್ಯ ಪುರ ಪೊಲೀಸ್ ಪೇದೆಗಳನ್ನು ಹಾಕಿದ್ದಾರೆ. ನನಗೆ ವಯಸ್ಸಾದ ತಂದೆ ತಾಯಿ ಇದ್ದಾರೆ. ಅವರಿಗೆ ಭದ್ರತೆ ಬೇಕು. ನಮಗೆ ಗನ್ ಮ್ಯಾನ್ ಅಗತ್ಯವಿದೆ. . ಗನ್ ಮ್ಯಾನ್ ಕೊಡುವುದು, ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಸುನೀಲ್ ಹೇಳಿದ್ದಾರೆ.
ರವಿ ಬೆಳಗೆರೆ ಒಬ್ಬ ಪ್ರಭಾವಿ ವ್ಯಕ್ತಿ. ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ನನಗೆ ಕರೆ ಮಾಡಿದ್ದಾರೆ. ಪ್ರಾಸಿಕ್ಯೂಷನ್ ಲಾಕಪ್ ಇದ್ದಾಗಲೇ ಫೋನ್ ಮಾಡಿ ಮಾತಾಡ್ತಾರೆ ಅಂದರೆ ಅವರ ಪ್ರಭಾವ ಇನ್ನೆಷ್ಟು ಇದೆ ನೀವೆ ಹೇಳಿ. ಹೀಗಾಗಿ ಭದ್ರತೆ ಕೋರಿದ್ದೇನೆ. ನ್ಯಾಯಾಲಯ ಎಲ್ಲದಕ್ಕಿಂತ ದೊಡ್ಡದು. ಜಾಮೀನು ಕೊಡೋದು ಬಿಡೋದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.