
ಬೆಂಗಳೂರು(ಏ.14): ಮಾಜಿ ರೌಡಿಶೀಟರ್ ನಾಗನ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ವ್ಯಕ್ತಿಯೊಬ್ಬರ ಅಪಹರಣಕ್ಕೆ ಸಂಬಂಧಿಸಿದಂತೆ ಎಸಿಪಿ ಬಡಿಗೇರ್ ನೇತೃತ್ವದಲ್ಲಿ ಶ್ರೀರಾಂ'ಪುರದ ಆತನ ಮನೆಯ ಮೇಲೆ ಸರ್ಚ್ ವಾರಂಟ್'ನೊಂದಿಗೆ 40ಕ್ಕೂ ಹೆಚ್ಚು ಪೊಲೀಸರು ಬಾಗಿಲು ಮುರಿದು ಒಳನುಗ್ಗಿದ್ದಾರೆ.
ಯಾರೊಬ್ಬರು ಮನೆಯ ಬಾಗಿಲು ತೆಗೆಯದೆ ಸತಾಯಿಸುತ್ತಿದ್ದಾಗ ಸುತ್ತಿಗೆಯಿಂದ ಕಿಟಿಕಿ ಮುರಿದು ಒಳನುಗ್ಗಿ ಶೋಧ ನಡೆಸಿದ್ದು,ಮನೆಯಲ್ಲಿ ರದ್ದುಗೊಂಡಿರುವ 500,1000 ರೂ.ಮುಖಬೆಲೆಯ ಕೊಟ್ಯಂತರ ರೂ. ನೋಟು ಪತ್ತೆಯಾಗಿದೆ. ಪೊಲೀಸರು ಆತನ ಪತ್ತೆಗೆ ಮತ್ತಷ್ಟು ಶೋಧ ನಡೆಸಿದ್ದಾರೆ. ಮನೆಯ ಸುತ್ತ ಖಾಕಿ ಸರ್ಪಗಾವಲು ಹಾಕಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.