ದೂರು ನೀಡಲು ಹೋದ ಮಹಿಳೆಗೆ ಪೋಲಿ ಪೊಲೀಸ್ ಕಿರುಕುಳ..!

Published : Dec 08, 2017, 09:21 AM ISTUpdated : Apr 11, 2018, 01:09 PM IST
ದೂರು ನೀಡಲು ಹೋದ ಮಹಿಳೆಗೆ ಪೋಲಿ ಪೊಲೀಸ್ ಕಿರುಕುಳ..!

ಸಾರಾಂಶ

ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಪೇದೆ ಗುರು ಮೂರ್ತಿ  ಮಂಡ್ಯ ಮೂಲದ ಮಹಿಳೆಯೊಬ್ಬರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ.

ಬೆಂಗಳೂರು(ಡಿ.8): ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಪೇದೆ ಗುರು ಮೂರ್ತಿ  ಮಂಡ್ಯ ಮೂಲದ ಮಹಿಳೆಯೊಬ್ಬರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ.  ವರಲಕ್ಷ್ಮಿ  ಎಂಬ ಮಹಿಳೆ ಪತಿ ಕಿರುಕುಳ ಕೊಡುತ್ತಾರೆ ಎಂದು  ದೂರು ನೀಡಲು ಹೋದ ವೇಳೆ  ಮಹಿಳೆಯ ನಂಬರ್ ಕಲೆಕ್ಟ್ ಮಾಡಿಕೊಂಡಿದ್ದ ಪೇದೆ ಗುರು ಮೂರ್ತಿ ಮರು ದಿನದಿಂದಲೇ ಆಕೆಗೆ ಕರೆ ಮಾಡೋದು, ವಾಟ್ಸಾಪ್’ನಲ್ಲಿ ಅಶ್ಲೀಲವಾಗಿ ಚಾಟ್ ಮಾಡೋಕೆ ಶುರು ಮಾಡಿದ್ದಾನೆ.

ಕೆಟ್ಟ ಫೋಟೊಗಳನ್ನು ಆಕೆ ಮೊಬೈಲ್ ಗೆ ಕಳುಹಿಸೋದು, ಕರೆ ಮಾಡಿ ಮಂಚಕ್ಕೆ ಕರೆಯೋದೂ ಮಾಡುತ್ತಾ ಇದ್ದಾನೆ.  ಅಷ್ಟೇ ಅಲ್ಲದೆ ಇದಕ್ಕೆ ಒಪ್ಪದಿದ್ರೆ, ನಿನ್ನ ವಿರುದ್ಧ ಇಲ್ಲ ಸಲ್ಲದ ಕೇಸ್ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.  ಇದರಿಂದ ಬೇಸತ್ತ ಮಹಿಳೆ ಆರೋಪಿ ಗುರು ಮೂರ್ತಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದು, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲು ಮುಂದಾಗಿದ್ದು  ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಳ್ಳಾರಿ: ಮನೆಯಿಂದ 10 ಕಿಲೋಮೀಟರ್‌ ದೂರ ಇರುವಾಗ ಅಪಘಾತ, ಒಂದೇ ಕುಟುಂಬದ ಮೂವರ ಸಾವು!
ದರ್ಶನ್ ಬಳಿಕ ಅಭಿಮಾನಿಗಳ ಅಶ್ಲೀಲ ಕಾಮೆಂಟ್‌ಗೆ ವಿಜಯಲಕ್ಷ್ಮಿ ಕೆಂಡಾಮಂಡಲ; 150 ಫೊಟೋ ಸಮೇತ ದೂರು!