
ಬೆಂಗಳೂರು: ಉದ್ಯಮಿ ಪುತ್ರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪೊಲೀಸರ ವಶದಲ್ಲಿರುವ ಶಾಸಕ ಹ್ಯಾರಿಸ್ ಪುತ್ರ ಮಹಮದ್ ನಲಪಾಡ್ಗೆ ವಿಪರೀತ ಪಿಸ್ತೂಲ್ ಶೋಕಿ ಇತ್ತು ಎನ್ನಲಾಗಿದೆ.
ಗನ್ ಹೊಂದಲು ನಲಪಾಡ್ ಕಳೆದ ವರ್ಷ ನಗರ ಪೊಲೀಸ್ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದ. ತಾನು ಶಾಸಕರ ಪುತ್ರ, ಸ್ವಂತ ವ್ಯವಹಾರ ಹೊಂದಿದ್ದೇನೆ. ಸೂಕ್ತ ಆತ್ಮ ರಕ್ಷಣೆಗಾಗಿ ಪಿಸ್ತೂಲ್ ಹೊಂದಲು ಪರವಾನಗಿ ಬೇಕೆಂದು 2017 ರಲ್ಲಿ ಅರ್ಜಿ ಸಲ್ಲಿಸಿದ್ದ. ಇದನ್ನು ಪರಿಶೀಲನೆ ನಡೆಸಿದ್ದ ಪೊಲೀಸರು ಕಳೆದ ವರ್ಷವೇ ನಲಪಾಡ್ಗೆ ಪಿಸ್ತೂಲ್ ಹೊಂದಲು ಅನುಮತಿ ಸಹ ನೀಡಿದ್ದರು.
ನಲಪಾಡ್ ಪಿಸ್ತೂಲ್ ಬಗ್ಗೆ ಸಾಕಷ್ಟು ಶೋಕಿ ಹೊಂದಿದ್ದ. ಗನ್ಗಳನ್ನು ಕೊಂಡು ಅದನ್ನು ಇಟ್ಟುಕೊಳ್ಳುತ್ತಿದ್ದ. ಪಿಸ್ತೂಲ್ ಹಿಡಿದು ತನ್ನ ಸ್ನೇಹಿತನ ಹಣೆಗೆ ಇಟ್ಟು ಕೊಲ್ಲುವ ರೀತಿಯಲ್ಲಿ ಬೆದರಿಕೆವೊಡ್ಡುವ ನಲಪಾಡ್ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಕೂಡ ವೈರಲ್ ಆಗಿದೆ. ಕೇವಲ ಗನ್ಮ್ಯಾನ್ಗಳನ್ನು ಮಾತ್ರ ಇಟ್ಟುಕೊಂಡು ಶೋಕಿ ಮಾಡುವುದಷ್ಟೇ ಅಲ್ಲ, ಜತೆಗೆ ಪಿಸ್ತೂಲ್ ಹೊಂದುವ ಶೋಕಿಕೊಂಡು ಹೊಂದಿದ್ದ.
ಹೀಗಾಗಿಯೇ ಪಿಸ್ತೂಲ್ ಹೊಂದಲು ಅನುಮತಿ ಪಡೆದಿದ್ದ ಎಂದು ತಿಳಿದು ಬಂದಿದೆ. ಪ್ರಭಾವಿ ಶಾಸಕರ ಪುತ್ರ ಹಾಗೂ ಆತ ಕೂಡ ವ್ಯವಹಾರ ನಡೆಸುತ್ತಿದ್ದ. ಆತ್ಮ ರಕ್ಷಣೆಗಾಗಿ ಪಿಸ್ತೂಲ್ ಹೊಂದು ಪರವಾನಗಿ ಕೇಳಿದ್ದ. ಈ ಕಾರಣಕ್ಕೆ ಅನುಮತಿ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.