
ಬೆಂಗಳೂರು(ಸೆ. 26): ರಾಜ್ಯದ ಪ್ರತಿಭಾನ್ವಿತ ಯುವ ಪೊಲೀಸರಿಗೆ ಸರಕಾರ ಭರ್ಜರಿ ಶಾಕ್ ಕೊಟ್ಟಿದೆ. ಪರೀಕ್ಷೆ ಬರೆದು ಬೇರೆ ಇಲಾಖೆಗೆ ಹೋಗಬೇಕೆನ್ನುವ ಪೊಲೀಸರು ಇನ್ಮುಂದೆ ಭಾರೀ ಮೊತ್ತದ ದಂಡ ತೆರಬೇಕಾಗುತ್ತದೆ. ಪೊಲೀಸ್ ವ್ಯವಸ್ಥೆ ಸುಧಾರಣೆ ಹೆಸರಿನಲ್ಲಿ ಪ್ರತಿಭಾನ್ವಿತ ಯುವ ಪೊಲೀಸರಿಗೆ ಸರಕಾರ ಇಂಥದ್ದೊಂದು ಆಘಾತ ನೀಡಿದೆ. ಬೇರೆ ಇಲಾಖೆಗೆ ಹೋಗಲು ಪೊಲೀಸರು ತೆರಬೇಕಾದ ದಂಡದ ಮೊತ್ತವನ್ನು ಸರಕಾರ ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಿದೆ.
ಪೇದೆಗಳಾದವರು ಕೆಲಸಕ್ಕೆ ಸೇರಿ 5 ವರ್ಷದೊಳಗೆ ಬೇರೆ ಇಲಾಖೆ ಹೋಗಬೇಕಾದರೆ ಈ ಮುಂಚೆ 50 ಸಾವಿರ ರೂಪಾಯಿ ದಂಡ ತೆರಬೇಕಿತ್ತು. ಇದೀದ ಆ ಮೊತ್ತವನ್ನು 2 ಲಕ್ಷ ರೂಪಾಯಿಗೆ ಸರಕಾರ ಏರಿಸಿದೆ.
ಯಾಕೆ ಈ ಕ್ರಮ?
ಯುವ ಪೊಲೀಸ್ ನೇಮಕಾತಿಗಳಿಗೆ ಇಲಾಖೆಯಿಂದ ತರಬೇತಿ ನೀಡಲಾಗುತ್ತದೆ. ಇದಕ್ಕೆ ಸಾಕಷ್ಟು ಸಂಪನ್ಮೂಲ ಮತ್ತು ಸಮಯದ ವ್ಯವವಾಗುತ್ತದೆ. ಹೀಗೆ ತರಬೇತಿ ಪಡೆದ ನಂತರ ಪೊಲೀಸರು ಬೇರೆ ಇಲಾಖೆ ಸೇರಿಕೊಂಡರೆ ಪೊಲೀಸ್ ಇಲಾಖೆಗೆ ನಷ್ಟವಾಗುತ್ತದೆ ಎನ್ನಲಾಗಿದೆ. ರಾಘವೇಂದ್ರ ಔರಾದ್ಕರ್ ನೇತೃತ್ವದ ಸಮಿತಿಯೊಂದು ಕೂಡ ತನ್ನ ವರದಿಯಲ್ಲಿ ಈ ಬಗ್ಗೆ ಬೆಳಕು ಚೆಲ್ಲಿತ್ತು. ಸ್ನಾತಕೋತ್ತರ ಪದವಿ ಪಡೆದು ಪೇದೆ ಹುದ್ದೆಗೆ ಸೇರಿಕೊಳ್ಳುವ ಯುವಕರು ಉನ್ನತ ಪರೀಕ್ಷೆ ಬರೆದು ಬೇರೆ ಇಲಾಖೆಗೆ ಹೋಗುವ ಪ್ರಮಾಣ ಹೆಚ್ಚುತ್ತಿದೆ ಎಂದು ಈ ಸಮಿತಿ ಆತಂಕ ವ್ಯಕ್ತಪಡಿಸಿತ್ತು.
ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ಕ್ರಮ ಕೈಗೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.