ಸಂಗೊಳ್ಳಿ ರಾಯಣ್ಣನ ಡೈಲಾಗ್ ಹೊಡೆದಿದ್ದಕ್ಕೆ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸಪ್ಪ..!

Published : Nov 05, 2017, 08:08 AM ISTUpdated : Apr 11, 2018, 01:01 PM IST
ಸಂಗೊಳ್ಳಿ ರಾಯಣ್ಣನ ಡೈಲಾಗ್ ಹೊಡೆದಿದ್ದಕ್ಕೆ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸಪ್ಪ..!

ಸಾರಾಂಶ

ಥಳಿತಕೊಳ್ಳಗಾದ ಜಾಕೀರ್, ವಿದ್ಯಾರ್ಥಿಗಳ ಮುಂದೆ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣನ ಡೈಲಾಗ್ ಹೇಳುತ್ತಿದ್ದ, ಈ ವೇಳೆ ಪೊಲೀಸರು ದರ್ಪವನ್ನ ತೊರಿದ್ದಾರೆ. ಪೊಲೀಸರ ಈ ಥಳಿತದಿಂದ ಜಾಕೀರ್ ಕೈಬೆರಳು ಮುರಿದು ಹೊಗಿದ್ದು. ಬೆನ್ನಿನಲ್ಲಿ ಬಾಸುಂಡೆ ಮೂಡಿವೆ.

ಬೆಳಗಾವಿ(ನ.05): ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣನ ಡೈಲಾಗ್ ಹೇಳುತ್ತಿದ್ದ ಅಮಾಯಕ ಯುವಕನ ಮೇಲೆ ಬೆಳಗಾವಿಯಲ್ಲಿ ಜಿಲ್ಲಾ ಪೊಲೀಸರು ದರ್ಪ ತೊರಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.  

ಸಾರ್ವಜನಿಕರ ಪ್ರದೇಶದಲ್ಲಿಯೇ ಬೈಲಹೊಂಗಲ ಠಾಣೆಯ ಪೊಲೀಸ್ ಈರಣ್ಣ ವಕ್ಕಂದ ಹಾಗೂ ಹೋಮ್ ಗಾರ್ಡ್'ಗಳು, ಕಲಾವಿದ ಜಾಕೀರ್ ಎಂಬುವರ ಮೇಲೆ ಅಮಾನವೀಯಾಗಿ ಹಲ್ಲೆ ನಡೆಸಿದ್ದು, ನಡು ರಸ್ತೆಯಲ್ಲಿ ಲಾಠಿಯಿಂದ ಯದ್ವಾ ತದ್ವಾ ಹೊಡೆದು, ಬೂಟು ಕಾಲಿನಿಂದ ಒದ್ದು, ಥಳಸಿರುವ ಘಟನೆ ನಿನ್ನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಬಸ್ ಸ್ಟ್ಯಾಂಡ್'ನಲ್ಲಿ  ನಡೆದಿದೆ.  

ಥಳಿತಕೊಳ್ಳಗಾದ ಜಾಕೀರ್, ವಿದ್ಯಾರ್ಥಿಗಳ ಮುಂದೆ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣನ ಡೈಲಾಗ್ ಹೇಳುತ್ತಿದ್ದ, ಈ ವೇಳೆ ಪೊಲೀಸರು ದರ್ಪವನ್ನ ತೊರಿದ್ದಾರೆ. ಪೊಲೀಸರ ಈ ಥಳಿತದಿಂದ ಜಾಕೀರ್ ಕೈಬೆರಳು ಮುರಿದು ಹೊಗಿದ್ದು. ಬೆನ್ನಿನಲ್ಲಿ ಬಾಸುಂಡೆ ಮೂಡಿವೆ. ಹಲ್ಲೆ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಲಾವಿದ ಜಾಕೀರ್ ಬೆಳಗಾವಿ ಎಸ್ಪಿ ರವಿಕಾಂತೇಗೌಡಗೆ ಮನವಿ ಮಾಡಿಕೊಂಡಿದ್ದಾನೆ‌.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದ್ವೇಷ ಭಾಷಣ ತಡೆಗೆ ಕಾನೂನು ಯತ್ನ: ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ
ದ್ವೇಷ ಭಾಷಣ ಶಾಸನ ಕಾಂಗ್ರೆಸ್ ಕ್ರೂರ ಸಂಪ್ರದಾಯದ ಪ್ರತಿಬಿಂಬ: ಪ್ರಲ್ಹಾದ್ ಜೋಶಿ ಕಿಡಿ