ಬೆಂಗಳೂರಿನಲ್ಲಿ ಮತ್ತೆ ಹೆಚ್ಚಿದ ರೌಡಿಗಳ ದಾಂಧಲೆ: ಕೊಲೆ ತಡೆಯಲು ಹೋದ ಸಬ್ ಇನ್ಸ್'ಪೆಕ್ಟರ್'ಗೆ ಮಚ್ಚಿನೇಟು

Published : Aug 26, 2017, 08:11 AM ISTUpdated : Apr 11, 2018, 12:50 PM IST
ಬೆಂಗಳೂರಿನಲ್ಲಿ ಮತ್ತೆ ಹೆಚ್ಚಿದ ರೌಡಿಗಳ ದಾಂಧಲೆ: ಕೊಲೆ ತಡೆಯಲು ಹೋದ ಸಬ್ ಇನ್ಸ್'ಪೆಕ್ಟರ್'ಗೆ ಮಚ್ಚಿನೇಟು

ಸಾರಾಂಶ

ಬೆಂಗಳೂರಿನಲ್ಲಿ ರೌಡಿಗಳ ದಾಂಧಲೆ ಹೆಚ್ಚಿದ್ದು, ಕೊಲೆ ತಡೆಯಲು ಹೋದ ಸಬ್ ​ಇನ್ಸ್ಪೆಕ್ಟರ್ ಮೇಲೆಯೇ ಹಾಡಹಗಲೇ ಮಾರಾಕಾಸ್ತ್ರಗಳಿಂದ  ಹಲ್ಲೆ ಮಾಡಿರುವ ಘಟನೆ ಡಿಜೆ ಹಳ್ಳಿಯ ಶಾಂಪುರ ಬಳಿ ನಡೆದಿದೆ.

ಬೆಂಗಳೂರು(ಆ.26): ಬೆಂಗಳೂರಿನಲ್ಲಿ ರೌಡಿಗಳ ದಾಂಧಲೆ ಹೆಚ್ಚಿದ್ದು, ಕೊಲೆ ತಡೆಯಲು ಹೋದ ಸಬ್ ​ಇನ್ಸ್ಪೆಕ್ಟರ್ ಮೇಲೆಯೇ ಹಾಡಹಗಲೇ ಮಾರಾಕಾಸ್ತ್ರಗಳಿಂದ  ಹಲ್ಲೆ ಮಾಡಿರುವ ಘಟನೆ ಡಿಜೆ ಹಳ್ಳಿಯ ಶಾಂಪುರ ಬಳಿ ನಡೆದಿದೆ.

ರೌಡಿ ಶೀಟರ್​ ನದೀಮ್​ ಗ್ಯಾಂಗ್​ ರೌಡಿ ಉಮರ್​ ಕೊಲೆ ಮಾಡಲು ಅಟ್ಟಾಡಿಸಿಕೊಂಡು ಹೋಗಿತ್ತು. ಈ ದೃಶ್ಯ ಕಂಡು ಕೊಲೆ ತಡೆಯಲು ಹೋದ ಡಿಜೆ ಹಳ್ಳಿ ಸಬ್​ ಇನ್ಸ್​​ಪೆಕ್ಟರ್ ನಯಾಜ್ ಅಹಮದ್ ಮೇಲೆ ನದೀಮ್​ ಗ್ಯಾಂಗ್​ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಸಬ್​ ಇನ್ಸ್​ಪೆಕ್ಟರ್​ ನಯಾಜ್​ ಅಹಮದ್'​ಗೆ ತಲೆಗೆ ಗಂಭೀರ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ರೌಡಿ ಶೀಟರ್​ ನದೀಮ್​ ಗ್ಯಾಂಗ್​ಗೆ ಪೊಲೀಸರು ಬಲೆ ಬೀಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅನ್ಯ ಧರ್ಮಿಯ ಜೊತೆ ಮದುವೆ: ಪುತ್ರಿಗೆ ಅಪ್ಪನ ಆಸ್ತಿಯಲ್ಲಿ ಹಕ್ಕಿಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ರಸಗೊಬ್ಬರ ಬಳಕೆ ಕಡಿಮೆ ಮಾಡಿ, ಮಣ್ಣಿನ ಆರೋಗ್ಯ ಕಾಪಾಡಿ: ಸಿಎಂ ಸಿದ್ದರಾಮಯ್ಯ ಸಲಹೆ