
ಬೆಂಗಳೂರು(ಜೂ.10): ಮಕ್ಕಳನ್ನು ಕಿಡ್ನಾಪ್ ಮಾಡಿ ಭಿಕ್ಷಾಟನೆ ಬಳಕೆ ಮಾಡುತ್ತಿದ್ದ ಭಯಾನಕ ಗ್ಯಾಂಗ್'ನ್ನು ಪತ್ತೆ ಹಚ್ಚಿದ್ದ ಸುವರ್ಣ ನ್ಯೂಸ್'ನ ಕವರ್ ಸ್ಟೋರಿ ತಂಡ ರಹಸಯ ಕಾರ್ಯಾಚರಣೆಯ ಮೂಲಕ ಇವರ ಬಣ್ಣ ಬಯಲು ಮಾಡಿತ್ತು. ಕವರ್ ಸ್ಟೋರಿ ಕಾರ್ಯಾಚರಣೆಯಿಂದ ಎಚ್ಚೆತ್ತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬೆಂಗಳೂರಿನ ಹಲವೆಡೆ ಬಿಕ್ಷುಕರ ಮೇಲೆ ದಾಳಿ ನಡೆಸಿ 100 ಕ್ಕೂ ಹೆಚ್ಚು ಬಿಕ್ಷುಕರನ್ನು ಬಂಧಿಸಿದ್ದಾರೆ.
ಕೇಂದ್ರ ಪರಿಹಾರ ಸಮಿತಿ ಕಾರ್ಯದರ್ಶಿ ಚಂದ್ರಾ ನಾಯಕ್ ನೇತೃತ್ವದಲ್ಲಿ ಮೆಜೆಸ್ಟಿಕ್ ಸುತ್ತಮುತ್ತ ಭಿಕ್ಷುಕರ ನಡೆದ ಈ ದಾಳಿಯಲ್ಲಿ 150ಕ್ಕೂ ಹೆಚ್ಚು ಬಿಕ್ಷುಕರನ್ನು ಬಂಧಿಸಲಾಗಿದೆ. ಈ ವೇಳೆ ಮಕ್ಕಳನ್ನು ಭಿಕ್ಷಾಟನೆಗೆ ತಳ್ಳತ್ತಿದ್ದ ಈ ಮಾಫಿಯಾದ ಕಿಂಗ್ಪಿನ್ ಕೂಡಾ ಅರೆಸ್ಟ್ ಆಗಿರುವ ಮಾಹಿತಿ ಲಭ್ಯವಾಗಿದೆ. ಅಲ್ಲದೇ ರಾಜಸ್ತಾನ, ಬಿಹಾರ, ಮಧ್ಯಪ್ರದೇಶ ಮೂಲದ ಗ್ಯಾಂಗ್'ಗಳೂ ಜೈಲು ಪಾಲಾಗಿವೆ. ಇದು ಕವರ್ ಸ್ಟೋರಿ ತಂಡದ ಬಿಗ್ ಇಂಪ್ಯಾಕ್ಟ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.