
ದುಬೈ: ಭಾರತದ ಶೇ.65 ಜನಸಂಖ್ಯೆಯು 35ರ ವಯೋಮಿತಿಯ ಒಳಗೆ ಇದೆ. ಈ ಯುವಕರನ್ನು ತಂತ್ರಜ್ಞಾನದ ಮೂಲಕ ಸಬಲೀಕರಣಗೊಳಿಸಿ ‘ನವ ಭಾರತ’ ಸೃಷ್ಟಿಸಲು ಸಾಧ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು. ಇದೇ ವೇಳೆ ಅಭಿವೃದ್ಧಿಗಾಗಿ ಆರು ‘ಆರ್’ಗಳ ಸೂತ್ರವನ್ನು ಮೋದಿ ಹೇಳಿದರು.
ಇಲ್ಲಿ ಭಾನುವಾರ ನಡೆದ ವಿಶ್ವ ಸರ್ಕಾರಿ ಶೃಂಗದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ರೆಡ್ಯೂಸ್ (ಕಡಿಮೆ ಬಳಕೆ), ರೀ ಯೂಸ್ ಹಾಗೂ ರೀಸೈಕಲ್ (ಮರುಬಳಕೆ), ರಿಕವರ್ (ಮರುವಶ), ರೀಡಿಸೈನ್ (ಮರು ವಿನ್ಯಾಸ), ರೀ ಮ್ಯಾನುಫ್ಯಾಕ್ಚರ್ (ಮರು ಉತ್ಪಾದನೆ) ಎಂಬುದೇ ಈ 6 ‘ಆರ್’ ಮಂತ್ರಗಳು. ಇವುಗಳು ನಿಮಗೆ ‘ಆನಂದ’ ತರುತ್ತವೆ ಎಂದು ಪ್ರಧಾನಿ ಮೋದಿ ತಿಳಿಸಿದರು.
‘ತಂತ್ರಜ್ಞಾನದ ಮೂಲಕ ಇಂದು ಮರುಭೂಮಿಯು ಭಾರಿ ಬದಲಾವಣೆ ಕಂಡಿದೆ. ಇದೊಂದು ಪವಾಡ. ನಾವು ತಂತ್ರ ಜ್ಞಾನವನ್ನು ಬಳಸಿ ಅಭಿವೃದ್ಧಿ ಸಾಧಿಸಬೇಕೇ ವಿನಾ ವಿನಾಶವನ್ನಲ್ಲ. ತಂತ್ರಜ್ಞಾನವು ಜನಸಾಮಾನ್ಯರಿಗೆ ಕನಿಷ್ಠ ಸರ್ಕಾರ-ಗರಿಷ್ಠ ಆಡಳಿತದ ಮೂಲಕ ಅನುಕೂಲ ಮಾಡಲಬಲ್ಲದು. ಇ-ಆಡಳಿತದಲ್ಲಿ ಇ ಎಂದರೆ ‘ಎಫೀಶಿಯಂಟ್, ಎಫೆಕ್ಟಿವ್, ಈಸಿ, ಎಂಪವರ್ ಮ್ತತು ಈಕ್ವಿಟಿ’ ಎಂದು ಮೋದಿ ಅಭಿಪ್ರಾಯಪಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.