
ಮುಂಬೈ: ಮುಂಬೈನ ವಾಯು ಸೀಮೆಯಲ್ಲಿ ವಿಸ್ತಾರ ಮತ್ತು ಏರಿಂಡಿಯಾ ವಿಮಾನಗಳ ಭಾರೀ ಅಪಘಾತವೊಂದು ಸ್ವಲ್ಪದರಲ್ಲೇ ತಪ್ಪಿಹೋದ ಘಟನೆ ನಡೆದಿದೆ.
ಫೆ.7ರಂದು 152 ಜನರನ್ನು ಹೊತ್ತ ವಿಸ್ತಾರ ಸಂಸ್ಥೆಯ ವಿಮಾನ ದೆಹಲಿಯಿಂದ ಪುಣೆಯತ್ತ ಹೊರಟಿತ್ತು. ಇದೇ ವೇಳೆ ವಿಸ್ತಾರ ವಿಮಾನಕ್ಕಿಂತ ಕೇವಲ 100 ಅಡಿ ದೂರದಲ್ಲೇ 109 ಪ್ರಯಾಣಿಕರನ್ನು ಹೊತ್ತ ಏರಿಂಡಿಯಾ ವಿಮಾನ ಕೂಡಾ ಬಂದಿತ್ತು.
ವಿಮಾನಗಳಲ್ಲಿ ಸ್ವಯಂಚಾಲಿತ ವ್ಯವಸ್ಥೆಯ ಎಚ್ಚರಿಕೆ ಪರಿಣಾಮ, ವಿಮಾನಗಳನ್ನು ತಕ್ಷಣವೇ ಸುರಕ್ಷಿತ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಹಾರಾಟ ಮುಂದುವರೆಸಲಾಯಿತು. ಈ ಬಗ್ಗೆ ಇದೀಗ ವಿಮಾನ ಅಪಘಾತ ತನಿಖಾ ಬ್ಯೂರೋ ತನಿಖೆ ಆರಂಭಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.