
ಏಜೆನ್ಸಿ ವೌ (ಉ.ಪ್ರ.) : ರಂಗೇರಿರುವ ಉತ್ತರಪ್ರದೇಶ ಚುನಾವಣಾ ಅಖಾಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಬಾಹುಬಲಿ’ ಚಿತ್ರವನ್ನು ಪ್ರಸ್ತಾಪ ಮಾಡಿದ್ದಾರೆ.
‘ಬಾಹುಬಲಿ ಚಿತ್ರದಲ್ಲಿ ಕಟ್ಟಪ್ಪನು ಬಾಹುಬಲಿಯನ್ನು ಕೊಂದಂತೆ ನಾವು ಕ್ರಿಮಿನಲ್ಗಳನ್ನು ಮಟ್ಟ ಹಾಕಲಿದ್ದೇವೆ’ ಎಂದು ಹೇಳಿದ್ದಾರೆ. ವೌ ಜಿಲ್ಲೆಯಲ್ಲಿ ಸೋಮವಾರ ಬಿಜೆಪಿ ರಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ‘ಇಷ್ಟು ವರ್ಷ ದುರಾಡಳಿತ ನಡೆಸಿದ್ದಕ್ಕಾಗಿ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಿಎಸ್ಪಿಯನ್ನೂ ಜನ ಶಿಕ್ಷಿಸಬೇಕು’ ಎಂದು ಕರೆ ನೀಡಿದರು.
3ನೇ ಹಂತದ ಚುನಾವಣೆ ನಡೆದ ನಂತರ ಎಸ್ಪಿ, ಬಿಎಸ್ಪಿ ಮತ್ತು ಕಾಂಗ್ರೆಸ್ಗೆ ಸೋಲು ಖಚಿತ ಎಂಬ ಅರಿವಾಗಿದೆ. ಹೀಗಾಗಿ ಕೊನೇ ಪಕ್ಷ ಯಾರಿಗೂ ಬಹುಮತ ಬಾರದಂತೆ ನೋಡಿಕೊಂಡು ಅತಂತ್ರ ವಿಧಾನಸಭೆ ಸೃಷ್ಟಿಗೆ ಈ ಮೂರು ಪಕ್ಷಗಳು ಸಂಚು ರೂಪಿಸಿವೆ.
ಬಿಜೆಪಿ ಸೋಲಿಸಲು ನೀವು ಏನು ಬೇಕಾದರೂ ಮಾಡಿ. ನಾನು ಚಿಂತಿಸಲ್ಲ. ಆದರೆ ನಿಮ್ಮಿಂದ ಈಗಾಗಲೇ ಹಾಳಾಗಿರುವ ಉತ್ತರಪ್ರದೇಶದ ಭವಿಷ್ಯದ ಜೊತೆ ಚೆಲ್ಲಾಟ ಆಡಬೇಡಿ’ ಎಂದು ಕಿಡಿಕಾರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.